<p>ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರ ರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ನುಸುಳುಕೋರನೊಬ್ಬನನ್ನು ಗಡಿ ಕಾವಲು ಪಡೆಯ (ಬಿಎಸ್ಎಫ್) ಯೋಧರು ಹತ್ಯೆಗೈದಿದ್ದಾರೆ.</p>.<p>ರಾಮಘಡ ಸೆಕ್ಟರ್ನ ಮಲ್ಲುಚಕ್ ಬಾರ್ಡರ್ನ ಔಟರ್ ಪೋಸ್ಟ್ ಪ್ರದೇಶದಲ್ಲಿ ಘಟನೆ ನಡೆದಿದೆ. ಕಳೆದ ವರ್ಷ ನವೆಂಬರ್ನಿಂದ ಇಲ್ಲಿಯ ವರೆಗೆ ಇಂತಹ ಮೂರನೇ ಘಟನೆ ನಡೆದಿದೆ ಎಂದು ಬಿಎಸ್ಎಫ್ ವಕ್ತಾರರು ಮಾಹಿತಿ ನೀಡಿದ್ದಾರೆ.</p>.<p>ಮಂಗಳವಾರ ಮಧ್ಯಾಹ್ನ 3.55ರ ಹೊತ್ತಿಗೆ ಪಾಕಿಸ್ತಾನದ ಲೆಹ್ರಿ ಕಲನ್ ಗ್ರಾಮದಿಂದ ಆಕ್ರಮಣಕಾರಿಯಾಗಿ ಚಲಿಸುತ್ತಾ ಬಂದ ವ್ಯಕ್ತಿ ಅಂತರ ರಾಷ್ಟ್ರೀಯ ಗಡಿ ಬೇಲಿಯನ್ನು ದಾಟಿ ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸಿದ್ದರು.</p>.<p>ವ್ಯಕ್ತಿಯನ್ನು ಪತ್ತೆ ಹಚ್ಚಿದ ಬಿಎಸ್ಎಫ್ ಯೋಧರು ಎಚ್ಚರಿಕೆ ರವಾನಿಸಿದರು. ಆದರೆ ಆತ ಪರಾರಿಯಾಗಲು ಯತ್ನಿಸಿದ ವೇಳೆ ಗುಂಡು ಹಾರಿಸಲಾಯಿತು.</p>.<p>ಇದನ್ನೂ ಓದಿ:<a href="https://www.prajavani.net/india-news/indias-surveillance-ship-almost-ready-for-induction-813996.html" itemprop="url">ಕಣ್ಗಾವಲು ಹಡಗು ಶೀಘ್ರ ಸೇವೆಗೆ ಸಮರ್ಪಣೆ </a></p>.<p>ಬಸಂತರ್ ನದಿಯು ಒಳನುಸುಳುವಿಕೆಯ ಸಾಂಪ್ರದಾಯಿಕ ಮಾರ್ಗವಾಗಿದೆ. ಲೆಹ್ರಿ ಕಲನ್ ಉಗ್ರರ ಹಳೆಯ ನೆಲೆಯಾಗಿದೆ.</p>.<p>ಹತ್ಯೆಗೀಡಾದ ವ್ಯಕ್ತಿಯ ಜೇಬಿನಲ್ಲಿ ಪಾಕಿಸ್ತಾನ ಕರೆನ್ಸಿಯ 200 ರೂ. ನೋಟು ಪತ್ತೆ ಹಚ್ಚಲಾಗಿದ್ದು, ಆತ ಮಾನಸಿಕವಾಗಿ ಅಸ್ವಸ್ಥ ಎಂಬುದು ತಿಳಿದು ಬಂದಿದೆ.</p>.<p>ಮರಣೋತ್ತರ ಪರೀಕ್ಷೆಯ ಬಳಿಕ ಫ್ಯಾಗ್ ಮೀಟಿಂಗ್ನಲ್ಲಿ ಆತನ ಮೃತದೇಹವನ್ನು ಪಾಕಿಸ್ತಾನ ರೇಜರ್ಗಳಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರ ರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ನುಸುಳುಕೋರನೊಬ್ಬನನ್ನು ಗಡಿ ಕಾವಲು ಪಡೆಯ (ಬಿಎಸ್ಎಫ್) ಯೋಧರು ಹತ್ಯೆಗೈದಿದ್ದಾರೆ.</p>.<p>ರಾಮಘಡ ಸೆಕ್ಟರ್ನ ಮಲ್ಲುಚಕ್ ಬಾರ್ಡರ್ನ ಔಟರ್ ಪೋಸ್ಟ್ ಪ್ರದೇಶದಲ್ಲಿ ಘಟನೆ ನಡೆದಿದೆ. ಕಳೆದ ವರ್ಷ ನವೆಂಬರ್ನಿಂದ ಇಲ್ಲಿಯ ವರೆಗೆ ಇಂತಹ ಮೂರನೇ ಘಟನೆ ನಡೆದಿದೆ ಎಂದು ಬಿಎಸ್ಎಫ್ ವಕ್ತಾರರು ಮಾಹಿತಿ ನೀಡಿದ್ದಾರೆ.</p>.<p>ಮಂಗಳವಾರ ಮಧ್ಯಾಹ್ನ 3.55ರ ಹೊತ್ತಿಗೆ ಪಾಕಿಸ್ತಾನದ ಲೆಹ್ರಿ ಕಲನ್ ಗ್ರಾಮದಿಂದ ಆಕ್ರಮಣಕಾರಿಯಾಗಿ ಚಲಿಸುತ್ತಾ ಬಂದ ವ್ಯಕ್ತಿ ಅಂತರ ರಾಷ್ಟ್ರೀಯ ಗಡಿ ಬೇಲಿಯನ್ನು ದಾಟಿ ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸಿದ್ದರು.</p>.<p>ವ್ಯಕ್ತಿಯನ್ನು ಪತ್ತೆ ಹಚ್ಚಿದ ಬಿಎಸ್ಎಫ್ ಯೋಧರು ಎಚ್ಚರಿಕೆ ರವಾನಿಸಿದರು. ಆದರೆ ಆತ ಪರಾರಿಯಾಗಲು ಯತ್ನಿಸಿದ ವೇಳೆ ಗುಂಡು ಹಾರಿಸಲಾಯಿತು.</p>.<p>ಇದನ್ನೂ ಓದಿ:<a href="https://www.prajavani.net/india-news/indias-surveillance-ship-almost-ready-for-induction-813996.html" itemprop="url">ಕಣ್ಗಾವಲು ಹಡಗು ಶೀಘ್ರ ಸೇವೆಗೆ ಸಮರ್ಪಣೆ </a></p>.<p>ಬಸಂತರ್ ನದಿಯು ಒಳನುಸುಳುವಿಕೆಯ ಸಾಂಪ್ರದಾಯಿಕ ಮಾರ್ಗವಾಗಿದೆ. ಲೆಹ್ರಿ ಕಲನ್ ಉಗ್ರರ ಹಳೆಯ ನೆಲೆಯಾಗಿದೆ.</p>.<p>ಹತ್ಯೆಗೀಡಾದ ವ್ಯಕ್ತಿಯ ಜೇಬಿನಲ್ಲಿ ಪಾಕಿಸ್ತಾನ ಕರೆನ್ಸಿಯ 200 ರೂ. ನೋಟು ಪತ್ತೆ ಹಚ್ಚಲಾಗಿದ್ದು, ಆತ ಮಾನಸಿಕವಾಗಿ ಅಸ್ವಸ್ಥ ಎಂಬುದು ತಿಳಿದು ಬಂದಿದೆ.</p>.<p>ಮರಣೋತ್ತರ ಪರೀಕ್ಷೆಯ ಬಳಿಕ ಫ್ಯಾಗ್ ಮೀಟಿಂಗ್ನಲ್ಲಿ ಆತನ ಮೃತದೇಹವನ್ನು ಪಾಕಿಸ್ತಾನ ರೇಜರ್ಗಳಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>