<p><strong>ಕೊಟ್ಟಾಯಂ: </strong>ಇಲ್ಲಿನ ಪ್ರಸಿದ್ಧ ಏಟ್ಟುಮಾನೂರು ಶಿವ ದೇವಾಲಯದಲ್ಲಿ ದೇವರಿಗೆ ಅಲಂಕರಿಸಿದ ಪವಿತ್ರ ರುದ್ರಾಕ್ಷ ಮಾಲೆಯ ಚಿನ್ನದ ಹೊದಿಕೆಯ ಮಣಿಗಳು ಕಾಣೆಯಾಗಿವೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.</p>.<p>ಇತ್ತೀಚೆಗೆ ನಡೆದ ಮುಖ್ಯ ಅರ್ಚಕ ಪದ್ಮನಾಭನ್ ಸಂತೋಷ್ ಅವರ ನೇತೃತ್ವದ ಆಂತರಿಕ ಲೆಕ್ಕಪರಿಶೋಧನೆಯಲ್ಲಿಪವಿತ್ರ ಮಾಲೆಯ ಒಟ್ಟು 81 ಮಣಿಗಳ ಪೈಕಿ 9 ಮಣಿಗಳು ಕಾಣೆಯಾಗಿರುವುದು ಕಂಡುಬಂದಿದೆ.</p>.<p>ಪ್ರಧಾನ ಅರ್ಚಕರಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ಅವರು, ದೇವಾಲಯದಲ್ಲಿ ಪೂಜೆಗಳು ಮತ್ತು ಇತರ ಆಚರಣೆಗಳಿಗೆ ಬಳಸಲಾಗುವ ಎಲ್ಲಾ ವಸ್ತುಗಳ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಸಂದರ್ಭ ಚಿನ್ನಲೇಪಿತ ಮಣಿಗಳು ಕಾಣೆಯಾಗಿರುವುದು ಕಂಡುಬಂದಿದೆ.</p>.<p>ಮಾಧ್ಯಮಗಳಲ್ಲಿ ಸುದ್ದಿ ಬಹಿರಂಗವಾಗುತ್ತಿದ್ದಂತೆ ಸಂಚಲನಕ್ಕೆ ಕಾರಣವಾಗಿದ್ದು, ದೇವಾಲಯದ ಸಲಹಾ ಸಮಿತಿ ಮತ್ತು ಭಕ್ತರು ತನಿಖೆಗೆ ಒತ್ತಾಯಿಸಿದ್ದಾರೆ. ಮಣಿಗಳನ್ನು ಯಾರಾದರೂ ಕದ್ದಿದ್ದಾರೆಯೇ ಅಥವಾ ಮೂಲ ರುದ್ರಾಕ್ಷ ಮಾಲೆಯನ್ನು ಕಡಿಮೆ ಸಂಖ್ಯೆಯ ಮಣಿಗಳಿರುವ ಮಾಲೆ ಮೂಲಕ ಬದಲಾಯಿಸಲಾಗಿದೆಯೇ ಎಂದು ತನಿಖೆಯಿಂದ ಹೊರಬರಲಿ ಎಂದು ಒತ್ತಾಯಿಸಿದ್ದಾರೆ.</p>.<p>ಈ ಕುರಿತಂತೆ, ದೇವಾಲಯದ ಆಡಳಿತ ಮಂಡಳಿಯಾಗಿರುವ ತಿರುವಾಂಕೂರ್ ದೇವಸ್ವಂ ಬೋರ್ಡ್ (ಟಿಡಿಬಿ) ಪವಿತ್ರ ಆಭರಣ (ತಿರುವಾಭರಣಂ)ಗಳ ಉಸ್ತುವಾರಿ ಹೊತ್ತಿದ್ದ ಆಯುಕ್ತರಿಂದ ವರದಿ ಕೇಳಿದೆ. ಪವಿತ್ರ ಆಭರಣದಲ್ಲಿರುವ ಒಟ್ಟು 81 ಮಣಿಗಳಲ್ಲಿನ 9 ಮಣಿಗಳು ಆಡಿಟ್ ಸಮಯದಲ್ಲಿ ಕಾಣೆಯಾಗಿರುವುದು ನಿಜ ಎಂದು ಟಿಡಿಬಿ ಅಧ್ಯಕ್ಷ ಎನ್ ವಾಸು ದೃಢಪಡಿಸಿದ್ದಾರೆ.</p>.<p>‘ಘಟನೆ ಕುರಿತಂತೆ ಸಮಯಕ್ಕೆ ಸರಿಯಾಗಿ ಮಂಡಳಿಗೆ ವರದಿ ಮಾಡದೆ ದೇವಸ್ಥಾನದ ಅಧಿಕಾರಿಗಳ ಕಡೆಯಿಂದ ಲೋಪವಾಗಿದೆ. ಮಣಿಗಳು ಕಾಣೆಯಾದ ಬಗ್ಗೆ ಮಾತ್ರವಲ್ಲದೆ, ಈ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಸಲಾಗುವುದು. ತನಿಖೆಯ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ಎಂದು ವಾಸು ಮಾಧ್ಯಮಗಳಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಟ್ಟಾಯಂ: </strong>ಇಲ್ಲಿನ ಪ್ರಸಿದ್ಧ ಏಟ್ಟುಮಾನೂರು ಶಿವ ದೇವಾಲಯದಲ್ಲಿ ದೇವರಿಗೆ ಅಲಂಕರಿಸಿದ ಪವಿತ್ರ ರುದ್ರಾಕ್ಷ ಮಾಲೆಯ ಚಿನ್ನದ ಹೊದಿಕೆಯ ಮಣಿಗಳು ಕಾಣೆಯಾಗಿವೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.</p>.<p>ಇತ್ತೀಚೆಗೆ ನಡೆದ ಮುಖ್ಯ ಅರ್ಚಕ ಪದ್ಮನಾಭನ್ ಸಂತೋಷ್ ಅವರ ನೇತೃತ್ವದ ಆಂತರಿಕ ಲೆಕ್ಕಪರಿಶೋಧನೆಯಲ್ಲಿಪವಿತ್ರ ಮಾಲೆಯ ಒಟ್ಟು 81 ಮಣಿಗಳ ಪೈಕಿ 9 ಮಣಿಗಳು ಕಾಣೆಯಾಗಿರುವುದು ಕಂಡುಬಂದಿದೆ.</p>.<p>ಪ್ರಧಾನ ಅರ್ಚಕರಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ಅವರು, ದೇವಾಲಯದಲ್ಲಿ ಪೂಜೆಗಳು ಮತ್ತು ಇತರ ಆಚರಣೆಗಳಿಗೆ ಬಳಸಲಾಗುವ ಎಲ್ಲಾ ವಸ್ತುಗಳ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಸಂದರ್ಭ ಚಿನ್ನಲೇಪಿತ ಮಣಿಗಳು ಕಾಣೆಯಾಗಿರುವುದು ಕಂಡುಬಂದಿದೆ.</p>.<p>ಮಾಧ್ಯಮಗಳಲ್ಲಿ ಸುದ್ದಿ ಬಹಿರಂಗವಾಗುತ್ತಿದ್ದಂತೆ ಸಂಚಲನಕ್ಕೆ ಕಾರಣವಾಗಿದ್ದು, ದೇವಾಲಯದ ಸಲಹಾ ಸಮಿತಿ ಮತ್ತು ಭಕ್ತರು ತನಿಖೆಗೆ ಒತ್ತಾಯಿಸಿದ್ದಾರೆ. ಮಣಿಗಳನ್ನು ಯಾರಾದರೂ ಕದ್ದಿದ್ದಾರೆಯೇ ಅಥವಾ ಮೂಲ ರುದ್ರಾಕ್ಷ ಮಾಲೆಯನ್ನು ಕಡಿಮೆ ಸಂಖ್ಯೆಯ ಮಣಿಗಳಿರುವ ಮಾಲೆ ಮೂಲಕ ಬದಲಾಯಿಸಲಾಗಿದೆಯೇ ಎಂದು ತನಿಖೆಯಿಂದ ಹೊರಬರಲಿ ಎಂದು ಒತ್ತಾಯಿಸಿದ್ದಾರೆ.</p>.<p>ಈ ಕುರಿತಂತೆ, ದೇವಾಲಯದ ಆಡಳಿತ ಮಂಡಳಿಯಾಗಿರುವ ತಿರುವಾಂಕೂರ್ ದೇವಸ್ವಂ ಬೋರ್ಡ್ (ಟಿಡಿಬಿ) ಪವಿತ್ರ ಆಭರಣ (ತಿರುವಾಭರಣಂ)ಗಳ ಉಸ್ತುವಾರಿ ಹೊತ್ತಿದ್ದ ಆಯುಕ್ತರಿಂದ ವರದಿ ಕೇಳಿದೆ. ಪವಿತ್ರ ಆಭರಣದಲ್ಲಿರುವ ಒಟ್ಟು 81 ಮಣಿಗಳಲ್ಲಿನ 9 ಮಣಿಗಳು ಆಡಿಟ್ ಸಮಯದಲ್ಲಿ ಕಾಣೆಯಾಗಿರುವುದು ನಿಜ ಎಂದು ಟಿಡಿಬಿ ಅಧ್ಯಕ್ಷ ಎನ್ ವಾಸು ದೃಢಪಡಿಸಿದ್ದಾರೆ.</p>.<p>‘ಘಟನೆ ಕುರಿತಂತೆ ಸಮಯಕ್ಕೆ ಸರಿಯಾಗಿ ಮಂಡಳಿಗೆ ವರದಿ ಮಾಡದೆ ದೇವಸ್ಥಾನದ ಅಧಿಕಾರಿಗಳ ಕಡೆಯಿಂದ ಲೋಪವಾಗಿದೆ. ಮಣಿಗಳು ಕಾಣೆಯಾದ ಬಗ್ಗೆ ಮಾತ್ರವಲ್ಲದೆ, ಈ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಸಲಾಗುವುದು. ತನಿಖೆಯ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ಎಂದು ವಾಸು ಮಾಧ್ಯಮಗಳಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>