‘ಮಾಧ್ಯಮಗಳ ಮೂಲಭೂತ ಹಕ್ಕನ್ನು ಹತ್ತಿಕ್ಕಬೇಕೆಂಬ ಉದ್ದೇಶದಿಂದ ನಾವು ಖಂಡಿತವಾಗಿಯೂ ಪಿಐಎಲ್ ಸಲ್ಲಿಸಿಲ್ಲ. ತಪ್ಪು ಮಾಹಿತಿಗಾಗಿ ಸಂಬಂಧಪಟ್ಟವರನ್ನು ಹೊಣೆಗಾರರನ್ನಾಗಿಸಲಿ, ಸುದ್ದಿ ವೈಭವೀಕರಣ, ಸುಳ್ಳು ಸುದ್ದಿಗಳ ಬಿತ್ತರಕ್ಕೆ ಕಡಿವಾಣ ಹಾಕಲಿ ಎಂಬುದಷ್ಟೇ ನಮ್ಮ ಕಳಕಳಿ’ ಎಂದು ನಿಲೇಶ್ ಮತ್ತು ನಿತಿನ್ ಹೇಳಿದ್ದಾರೆ.