‘ಸ್ವಾಮಿತ್ವ’ ಎಂಬುದು ಪಂಚಾಯತ್ ರಾಜ್ ಸಚಿವಾಲಯದ ಯೋಜನೆಯಾಗಿದ್ದು, ರಾಷ್ಟ್ರೀಯ ಪಂಚಾಯತ್ ದಿನವಾದ ಏ. 24ರಂದು ಘೋಷಿಸಲಾಗಿತ್ತು. ಗ್ರಾಮೀಣ ಭಾಗದಲ್ಲಿ ಕುಟುಂಬಗಳ ಮಾಲೀಕರಿಗೆ ಆಸ್ತಿ ಒಡೆತನ ಕುರಿತ ಕಾರ್ಡ್ಗಳನ್ನು ನೀಡುವುದು ಯೋಜನೆ ಉದ್ದೇಶ. ನಾಲ್ಕು ವರ್ಷಗಳಳಲ್ಲಿ ಹಂತ ಹಂತವಾಗಿ ದೇಶದಾದ್ಯಂತ ಯೋಜನೆ ಜಾರಿಗೆ ಬರಲಿದ್ದು, ಒಟ್ಟು 6.62 ಲಕ್ಷ ಗ್ರಾಮಗಳನ್ನು ಒಳಗೊಳ್ಳಲಿದೆ.