'ರೈತರ ಪ್ರತಿಭಟನೆಗಳ ಬಗ್ಗೆ ಚರ್ಚಿಸಲು ಪ್ರಧಾನಿಯವರನ್ನು ಭೇಟಿಯಾಗಿದ್ದೆ. ಆಗ ಪ್ರಧಾನಿ ನರೇಂದ್ರ ಮೋದಿ ಅವರು ಬಹಳ ದುರಹಂಕಾರದಲ್ಲಿ ಮಾತನಾಡಿದರು. ನಮ್ಮವರೇ (ರೈತರು) 500 ಮಂದಿ ಸತ್ತಿದ್ದಾರೆ ಎಂದು ನಾನು ಅವರಿಗೆ ಹೇಳಿದೆ. ಅದಕ್ಕವರು, ರೈತರು ನನಗಾಗಿ ಸತ್ತಿದ್ದಾರೆಯೇ? ಎಂದು ಪ್ರಶ್ನೆ ಮಾಡಿದರು. ನೀವುದೊರೆಯಾಗಿರುವುದರಿಂದನಿಮಗಾಗಿಯೇ ಸತ್ತಿದ್ದಾರೆ ಎಂದು ನಾನು ಹೇಳಿದೆ. ನಂತರ ಅವರೊಂದಿಗೆ ನಾನು ಹೆಚ್ಚು ಚರ್ಚೆ ಮಾಡಲು ಹೋಗಲಿಲ್ಲ,' ಎಂದು ಅವರು ಹೇಳಿರುವುದು ವಿಡಿಯೊದಲ್ಲಿದೆ.