ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LIVE | 80 ಕೋಟಿ ಮಂದಿಗೆ ಉಚಿತ ಪಡಿತರ ಯೋಜನೆ ಮುಂದುವರಿಕೆ: ಪ್ರಧಾನಿ ಮೋದಿ ಘೋಷಣೆ
LIVE

ಕಳೆದ ವರ್ಷ ಕೋವಿಡ್-19 ಸಾಂಕ್ರಾಮಿಕ ಹರಡಲು ಆರಂಭವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಯನ್ನು ಉದ್ದೇಶಿಸಿ ಅನೇಕ ಬಾರಿ ಮಾತನಾಡಿದ್ದಾರೆ. ಸಲಹೆ ಸೂಚನೆಗಳನ್ನು ನೀಡುತ್ತಲೇ ಬಂದಿದ್ದಾರೆ. ಇದೀಗ ಅವರು ಮತ್ತೊಮ್ಮೆ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಮೋದಿ ಮಾತಿನ ಕ್ಷಣಕ್ಷಣದ ಅಪ್‌ಡೇಟ್ಸ್ ಇಲ್ಲಿ ಲಭ್ಯ
Last Updated 7 ಜೂನ್ 2021, 12:13 IST
ಅಕ್ಷರ ಗಾತ್ರ
12:0507 Jun 2021

ನಾವೆಲ್ಲರೂ ಕೊರೊನಾ ವಿರುದ್ಧದ ಈ ಯುದ್ಧವನ್ನು ಜಯಿಸುತ್ತೇವೆ, ಭಾರತವು ಕೊರೊನಾ ವಿರುದ್ಧ ಜಯಿಸುತ್ತದೆ. ಎಲ್ಲರಿಗೂ ಶುಭವಾಗಲಿ, ಧನ್ಯವಾದ

12:0407 Jun 2021

ಕೆಲವು ಕಡೆಗಳಲ್ಲಿ ಕೊರೊನಾ ಕರ್ಫ್ಯೂ ಸಡಿಲಿಸಲಾಗುತ್ತಿದೆ. ಆದರೆ, ಕೊರೊನಾ ಓಡಿ ಹೋಗಿದೆ ಎಂದು ತಿಳಿಯಬೇಕಿಲ್ಲ. ಎಚ್ಚರಿಕೆ ವಹಿಸಲೇಬೇಕು.

12:0307 Jun 2021

ಸಮಾಜದ ಪ್ರಬುದ್ಧ, ಯುವ ಜನರಲ್ಲಿ ಮನವಿ ಏನೆಂದರೆ, ಲಸಿಕೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಹಕಾರ ನೀಡಿ.

12:0207 Jun 2021

ಲಸಿಕೆ ಬಗ್ಗೆ ಶಂಕೆ ಹುಟ್ಟಿಸಿಹಾಕಿದವರು ಅವರು ಮುಗ್ಧ ಜನರ ಜೀವನದ ಜೊತೆ ಚೆಲ್ಲಾಟವಾಡಿದರು. ಅಂಥವರಿಂದ ದೂರವಿರಿ.

12:0207 Jun 2021

ಇದನ್ನೆಲ್ಲಾ ದೇಶವೇ ನೋಡುತ್ತಿದೆ.

12:0207 Jun 2021

ಭಾರತದ ಲಸಿಕೆ ಬಂದಾಗ, ಅದರ ಬಗ್ಗೆ ಶಂಕೆ ಮತ್ತಷ್ಟು ಹೆಚ್ಚುವಂತೆ ಮಾಡಲಾಯಿತು.

12:0107 Jun 2021

ಭಾರತದಲ್ಲಿ ಲಸಿಕೆ ಬಗ್ಗೆ ಕಾರ್ಯಕ್ರಮ ಆರಂಭವಾದಂದಿನಿಂದಲೇ ಕೆಲವು ಮಂದಿ ಜನ ಸಾಮಾನ್ಯರ ಮನಸ್ಸಿನಲ್ಲಿ ಶಂಕೆಯ ಬೀಜ ಬಿತ್ತುವ ಕೆಲಸ ಮಾಡಿದರು.

12:0107 Jun 2021

ದೇಶದಲ್ಲಿ ಇಷ್ಟೆಲ್ಲ ಪ್ರಯಾಸ ನಡೆಸುತ್ತಿದ್ದರೂ, ಲಸಿಕೆಯ ಕುರಿತು ಭ್ರಮೆ, ಭಯ, ಆತಂಕ ಮೂಡಿದೆ.

12:0007 Jun 2021

ಪ್ರತಿಯೊಬ್ಬ ಬಡ ನಾಗರಿಕರೊಂದಿಗೆ ಸರ್ಕಾರವೂ ಜೊತೆಗಿರುತ್ತದೆ. ನವೆಂಬರ್‌ವರೆಗೆ ಎಲ್ಲ 80 ಕೋಟಿ ಮಂದಿಗೆ, ಉಚಿತವಾಗಿ ಧಾನ್ಯ ವಿತರಿಸಲಾಗುತ್ತದೆ.

12:0007 Jun 2021

ಈ ಯೋಜನೆಯು ದೀಪಾವಳಿವರೆಗೂ ಮುಂದುವರಿಯಲಿದೆ.