ಶಿವಗಿರಿ ತೀರ್ಥಯಾತ್ರೆಯ 90ನೇ ವರ್ಷಾಚರಣೆ ಹಾಗೂ ಬ್ರಹ್ಮ ವಿದ್ಯಾಲಯದ ಸುವರ್ಣ ಮಹೋತ್ಸವದ ಅಂಗವಾಗಿ ಶ್ರೀ ನಾರಾಯಣ ಧರ್ಮ ಸಂಘ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ‘ಭಾರತೀಯರಾದ ನಮಗೆ ಇರುವುದು ಒಂದೇ ಜಾತಿ, ಅದು ಭಾರತೀಯತೆ. ಒಂದೇ ಧರ್ಮ, ಅದು ಸೇವೆ ಮತ್ತು ಕರ್ತವ್ಯ. ಒಂದೇ ದೇವರು, ಅದು ಭಾರತ ಮಾತೆ’ ಎಂದರು.