ನವದೆಹಲಿ: ಭಾರತದ 72ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶದ ಜನರನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ್ದಾರೆ. ಎಲ್ಲರಿಗೂ ರಾಷ್ಟ್ರಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನದಲ್ಲಿ ರಾಷ್ಟ್ರಪತಿ ಅವರ ಭಾಷಣ ಪ್ರಸಾರವಾಗಿದೆ.
* ಕೊರೊನಾ ವೈರಸ್ ಲಸಿಕೆ ಪಡೆಯುವಂತೆ ರಾಷ್ಟ್ರಪತಿ ದೇಶದ ಜನರಿಗೆ ಆಗ್ರಹಿಸಿದ್ದಾರೆ
* ಕೊರೊನಾ ವೈರಸ್ ಸಾಂಕ್ರಾಮಿಕದ ಕಠಿಣ ಪರಿಸ್ಥಿತಿಯ ಬಳಿಕ ಭಾರತದ ಆರ್ಥಿಕತೆ ಮತ್ತೆ ಚೇತರಿಸಿಕೊಳ್ಳುತ್ತಿದೆ.
* ಸರ್ಕಾರದ ಸ್ವಾವಲಂಬಿ ಯೋಜನೆಗಳು ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ.
* ಕೊರೊನಾ ವೈರಸ್ನ ಕುರಿತು ಅಧ್ಯಯನ ನಡೆಸಿ ಅತ್ಯಂತ ಕಡಿಮೆ ಅವಧಿಯಲ್ಲಿ ಲಸಿಕೆ ಅಭಿವೃದ್ಧಿ ಪಡಿಸುವ ಮೂಲಕ ನಮ್ಮ ವಿಜ್ಞಾನಿಗಳು ಇತಿಹಾಸ ಸೃಷ್ಟಿಸಿದ್ದಾರೆ.
* ದೇಶಕ್ಕೆ ರೈತರು ನೀಡುತ್ತಿರುವ ಕೊಡುಗೆ ಅಭಿನಂದನೀಯ.
* ಸಂವಿಧಾನದ ಮೇಲಿನ ನಮ್ಮ ನಂಬಿಕೆ ಮತ್ತು ರಾಷ್ಟ್ರಧ್ವಜಕ್ಕೆ ನಮ್ಮ ಗೌರವವನ್ನು ರಾಷ್ಟ್ರೀಯ ಹಬ್ಬದವಾದ ಗಣರಾಜ್ಯೋತ್ಸವದಲ್ಲಿ ಮಾಡುತ್ತೇವೆ.
* ಬಾಲ ಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್, ಮಹಾತ್ಮ ಗಾಂಧಿ ಹಾಗೂ ಸುಭಾಷ್ ಚಂದ್ರ ಬೋಸ್ ರೀತಿಯ ಹಲವು ಮುಖಂಡರು ಹಾಗೂ ಚಿಂತಕರು ನಮ್ಮ ಸ್ವತಂತ್ರ ಹೋರಾಟಕ್ಕೆ ಸ್ಫೂರ್ತಿ ನೀಡಿದರು.
* ಕೋವಿಡ್–19 ಸಾಂಕ್ರಾಮಿಕ, ಪರಿಸರದಲ್ಲಿನ ಸವಾಲುಗಳ ನಡುವೆಯೂ ನಮ್ಮ ರೈತರು ಬೆಳೆ ಬೆಳೆಯುವುದನ್ನು ಮುಂದುವರಿಸಿದರು. ರಾಷ್ಟ್ರವು ರೈತರ ಕಲ್ಯಾಣಕ್ಕಾಗಿ ಸಂಪೂರ್ಣ ಬದ್ಧವಾಗಿದೆ.
* ನಮ್ಮ ಯೋಧರ ಶೌರ್ಯ, ರಾಷ್ಟ್ರಪ್ರೇಮ ಹಾಗೂ ತ್ಯಾಗ ಮನೋಭಾವದ ಬಗ್ಗೆ ದೇಶದ ಪ್ರತಿಯೊಬ್ಬ ನಾಗರಿಕ ಸಹ ಹೆಮ್ಮೆ ಪಡುತ್ತಾರೆ.
* ಸಿಯಾಚಿನ್ ಮತ್ತು ಗಾಲ್ವಾನ್ ಕಣಿವೆ ಪ್ರದೇಶದ ಮೈನಸ್ 50ರಿಂದ 60 ಡಿಗ್ರಿ ಸೆಲ್ಸಿಯಸ್ ಕೊರೆಯುವ ಚಳಿಯಲ್ಲಿ ಹಾಗೂ ಜೈಸ್ಮೇರ್ನ 50 ಡಿಗ್ರಿ ಸೆನ್ಸೆಯಸ್ ಅತಿಯಾದ ಬಿಸಿಲಿನ ಪ್ರದೇಶಗಳು, ವಿಸ್ತಾರ ಕರಾವಳಿ ಪ್ರದೇಶಗಳಲ್ಲಿ ನಮ್ಮ ಯೋಧರು ರಕ್ಷಣೆಗೆ ನಿಂತಿದ್ದಾರೆ.
* ಕೊರೊನಾ ವಾರಿಯರ್ಗಳಾದ ಸಾಮಾನ್ಯ ನಾಗರಿಕರು ಅಸಮಾನ್ಯರೆನಿಸಿದ್ದಾರೆ. ಕೋವಿಡ್ನಿಂದಾಗಿ ಸುಮಾರು 1.5 ಲಕ್ಷ ಜನರು ಸಾವಿಗೀಡಾಗಿದ್ದಾರೆ. ಅವರ ಕುಟುಂಬಗಳಿಗೆ ನನ್ನ ಸಂತಾಪಗಳನ್ನು ತಿಳಿಸುತ್ತೇನೆ.
* ವೈದ್ಯರು, ನರ್ಸ್ಗಳು, ಪ್ಯಾರಾಮೆಡಿಕ್ಗಳು, ಆರೋಗ್ಯ ವ್ಯವಸ್ಥೆಯ ಆಡಳಿತ ನಿರ್ವಹಣೆ ಮಾಡಿದವರು, ಶುಚಿತ್ವ ಕಾರ್ಯಗಳಲ್ಲಿ ತೊಡಗಿಸಿಕೊಂಡ ಸಿಬ್ಬಂದಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೋವಿಡ್–19 ರೋಗಿಗಳ ಆರೈಕೆಗಾಗಿ ಕಾರ್ಯನಿರ್ವಹಿಸಿದ್ದಾರೆ. ಬಹಳಷ್ಟು ಜನರು ಮೃತಪಟ್ಟಿದ್ದಾರೆ.
* ವಿದ್ಯಾರ್ಥಿಗಳಿಗೆ ಕಲಿಯುವ ಪ್ರಕ್ರಿಯೆಯು ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ಹಳಿ ತಪ್ಪಿದಂತಾಯಿತು. ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರು ಕ್ಷಿಪ್ರಗತಿಯಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಶಿಕ್ಷಣಕ್ಕೆ ಎದುರಾಗಿದ್ದ ತೊಡಕು ನಿವಾರಿಸಿದ್ದಾರೆ.
* ಕಠಿಣ ಪರಿಸ್ಥಿತಿಯಲ್ಲಿಯೂ ಬಿಹಾರ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ನಲ್ಲಿ ಚುನಾವಣೆ ಯಶಸ್ವಿಯಾಗಿ ನಡೆಸುವ ಮೂಲಕ ಚುನಾವಣೆ ಆಯೋಗ ಮತ್ತು ನಮ್ಮ ಪ್ರಜಾಪ್ರಭುತ್ವ ಹೊಸ ಮೈಲಿಗಲ್ಲು ತಲುಪಿದೆ.
* ನ್ಯಾಯಾಂಗವು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ನ್ಯಾಯ ನೀಡುವುದು ಮುಂದುವರಿಸಿತು.
* ವಿದೇಶಿ ಹೂಡಿಕೆಗೆ ಭಾರತವು ಅತ್ಯುತ್ತಮ ತಾಣವಾಗಿ ತೋರುತ್ತಿದೆ, ಜಿಎಸ್ಟಿ ಸಂಗ್ರಹದಲ್ಲಿ ಏರಿಕೆಯಾಗಿರುವುದು ದೇಶದ ಆರ್ಥಿಕತೆಯ ಚೇತರಿಕೆಯನ್ನು ತೋರುತ್ತದೆ.
* ನಾವು ಭಾರತೀಯರು ಮನುಷ್ಯತ್ವಕ್ಕಾಗಿ ಬದುಕುತ್ತೇವೆ ಮತ್ತು ಸಾಯುತ್ತೇವೆ– ಮೈತಿಲಿ ಶರಣ್ ಗುಪ್ತ್ ಅವರ ಕವನದಲ್ಲಿ ಅದು ವ್ಯಕ್ತವಾಗಿದೆ.
We Indians live and die for humanity. This Indian ideal has been expressed by the great poet Maithili Sharan Gupt in these words:
— President of India (@rashtrapatibhvn) January 25, 2021
उसी उदार की सदा, सजीव कीर्ति कूजती;
तथा उसी उदार को, समस्त सृष्टि पूजती।
अखण्ड आत्मभाव जो, असीम विश्व में भरे¸
वही मनुष्य है कि जो, मनुष्य के लिये मरे
* ಸಂಕಷ್ಟದ ಸಮಯವನ್ನು ಅವಕಾಶವನ್ನಾಗಿ ಬಳಸಿಕೊಂಡು ಪ್ರಧಾನಿ 'ಆತ್ಮ ನಿರ್ಭರ ಭಾರತ ಅಭಿಯಾನ' ಕರೆ ನೀಡಿದರು. ಸ್ವಾವಲಂಬಿ ಭಾರತದ ಪ್ರಯತ್ನಗಳಿಗೆ ಯುವ ಜನರು ಪುಷ್ಠಿ ನೀಡಲಿದ್ದಾರೆ.
* ಅಂತರರಾಷ್ಟ್ರೀಯ ವೇದಿಕೆಯಲ್ಲಿ ಜ್ಞಾನದ ಗೂಡಾಗಿ ಹೊಸ ಭಾರತವು ಹೊರಹೊಮ್ಮಲು 'ರಾಷ್ಟ್ರೀಯ ಶಿಕ್ಷಣ ನೀತಿ 2020' ಅಡಿಪಾಯ ಹಾಕಲಿದೆ.
Let us all continue on the path of constitutional morality which Babasaheb Dr. Bhimrao Ambedkar mentioned in his speech to the Constituent Assembly on November 4, 1948. He clarified that Constitutional morality means supremacy of the values enshrined in the Constitution.
— President of India (@rashtrapatibhvn) January 25, 2021
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.