ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ಮಂದಿಗೆ ಶೌರ್ಯ ಚಕ್ರ

Last Updated 14 ಆಗಸ್ಟ್ 2020, 23:26 IST
ಅಕ್ಷರ ಗಾತ್ರ

ನವದೆಹಲಿ: ಲೆಫ್ಟಿನೆಂಟ್‌ ಕರ್ನಲ್‌ ಕೃಷ್ಣ ಸಿಂಗ್‌ ರಾವತ್‌, ಮೇಜರ್‌ ಅನಿಲ್ ಅರಸ್‌, ಹವಾಲ್ದಾರ್‌ ಅಲೋಕ್‌ ಕುಮಾರ್‌ ದುಬೆ ಹಾಗೂ ವಿಂಗ್‌ ಕಮಾಂಡರ್‌ ವಿಶಾಖ್‌ ನಾಯರ್‌ ಅವರು ಶೌರ್ಯ ಚಕ್ರ ಗೌರವಕ್ಕೆ ಭಾಜನರಾಗಿದ್ದಾರೆ.

60 ಮಂದಿ ವೀರ ಯೋಧರಿಗೆ ಸೇನಾ ಪದಕ (ಶೌರ್ಯ), ನೌಕಾಪಡೆಯ ನಾಲ್ಕು ಮಂದಿಗೆ ‘ನವೊ ಸೇನಾ ಪದಕ’, ಭಾರತೀಯ ವಾಯುಪಡೆಯ ಐದು ಮಂದಿಗೆ ‘ವಾಯು ಸೇನಾ ಪದಕ’ ನೀಡಲು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಶುಕ್ರವಾರ ಒಪ್ಪಿಗೆ ಸೂಚಿಸಿದ್ದಾರೆ.

‘ಆ‍ಪರೇಷನ್‌ ಮೇಘದೂತ್‌’ ಮತ್ತು ‘ಆಪರೇಷನ್‌ ರಕ್ಷಕ್‌’ ಸೇನಾ ಕಾರ್ಯಾಚರಣೆಗಳಲ್ಲಿ ಮಡಿದ ಎಂಟು ಮಂದಿ ಯೋಧರಿಗೆ ಮರಣೋತ್ತರ ಸೇನಾ ಪದಕ ನೀಡಲು ನಿರ್ಧರಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಇವರಿಗೆ ಪದಕಗಳನ್ನು ಪ್ರದಾನ ಮಾಡಲಾಗುತ್ತದೆ.

ಗಾಲ್ವನ್‌ ಕಣಿವೆ ಸಂಘರ್ಷದಲ್ಲಿ ಹುತಾತ್ಮರಾದವರಿಗೆ ಮುಂದಿನ ವರ್ಷ ಪದಕ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT