ಅಮೃತಸರ: ಶಿವಸೇನಾ ನಾಯಕ ಸುಧೀರ್ ಸೂರಿ ಹತ್ಯೆ ಪ್ರಕರಣದ ಮುಖ್ಯ ಆರೋಪಿ ಸಂದೀಪ್ ಸಿಂಗ್ ಎಂಬಾತನನ್ನು ಇಲ್ಲಿ ನ್ಯಾಯಾಲಯವೊಂದು ಶನಿವಾರ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಅಮೃತಸರದ ಜನದಟ್ಟಣಿಯ ಪ್ರದೇಶವಾದ ಗೋಪಾಲಸ್ವಾಮಿ ಮಂದಿರದ ಎದುರು ಶುಕ್ರವಾರ ದೇವಾಸ್ಥಾನದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿಸುಧೀರ್ ಸೂರಿ ಅವರ ಮೇಲೆ ಆರೋಪಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದ.
ಕೂಡಲೇಆರೋಪಿಯನ್ನು ಬಂಧಿಸಿದ ಪೊಲೀಸರು ಅವನ ಬಳಿಯಿದ್ದ ಬಂದೂಕನ್ನು ವಶಪಡಿಸಿಕೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.