ಮಧ್ಯಪ್ರದೇಶದಲ್ಲಿ ಯಾತ್ರೆ ಪೂರ್ಣಗೊಳಿಸಿ ರಾಜಸ್ಥಾನದ ಗಡಿಯಲ್ಲಿರುವಝಾಲ್ರಾಪಾಟನ್ ಕಾಲಿತಲಾಯಿ ಗ್ರಾಮದಿಂದ ಬೆಳಿಗ್ಗೆ 6.10ಕ್ಕೆ ಯಾತ್ರೆ ಆರಂಭಿಸಿದ ರಾಹುಲ್ ಜತೆಗೆ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಮತ್ತು ಪ್ರಭಾವಿ ನಾಯಕ ಸಚಿನ್ ಪೈಲಟ್ ಅವರು ಒಗ್ಗಟ್ಟಿನಲ್ಲಿ ಹೆಜ್ಜೆ ಹಾಕಿದರು.ಎಐಸಿಸಿ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಕೆ.ಸಿ. ವೇಣುಗೋಪಾಲ್, ರಾಜಸ್ಥಾನದ ಕಾಂಗ್ರೆಸ್ ಘಟಕದ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ, ಹಿರಿಯ ನಾಯಕ ಭನ್ವಾರ್ ಜಿತೇಂದ್ರ ಸಿಂಗ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರತಾಪ್ ಸಿಂಗ್ ಖಚಾರಿಯಾವಾಸ್ ಯಾತ್ರೆಯಲ್ಲಿ ಜತೆಗೂಡಿದರು.