‘ರೈಲ್ವೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಸುಶೀಲ್ ಕುಮಾರ್ ಅವರು ಶಾಲಾಮಟ್ಟದಲ್ಲಿ ಕ್ರೀಡೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ದೆಹಲಿ ಸರ್ಕಾರದಲ್ಲಿ ಕರ್ತವ್ಯ ನಿರ್ವಹಿಸಲು 2015ರಲ್ಲಿ ನಿಯೋಜನೆಗೊಂಡಿದ್ದರು. ಸುಶೀಲ್ ಕುಮಾರ್ ಅವರನ್ನು ಛತ್ರಸಾಲಾ ಕ್ರೀಡಾಂಗಣದ ವಿಶೇಷ ಅಧಿಕಾರಿಯನ್ನಾಗಿ ನಿಯೋಜಿಸಿತ್ತು. ಈ ನಿಯೋಜನೆಯನ್ನು 2020ರವರೆಗೆ ವಿಸ್ತರಿಸಲಾಗಿತ್ತು. 2021ರಲ್ಲಿ ಸುಶೀಲ್ ಕುಮಾರ್ ಅವರು ವಿಸ್ತರಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ದೆಹಲಿ ಸರ್ಕಾರ ಅದನ್ನು ತಿರಸ್ಕರಿಸಿತ್ತು. ಬಳಿಕ, ಮಾತೃ ಇಲಾಖೆಗೆ ಹಿಂತಿರುಗಿದ್ದರು’ ಎಂದು ಉತ್ತರ ರೈಲ್ವೆ ಅಧಿಕಾರಿಗಳು ತಿಳಿಸಿದರು.