ಕೋಲ್ಕತ್ತ: ಪಶ್ಚಿಮ ಬಂಗಾಳದ ರಾಜಭವನವನ್ನು ಕಣ್ಗಾವಲಿನಲ್ಲಿ ಇರಿಸಲಾಗಿದ್ದು, ಈ ಕ್ರಮವು ಸಂಸ್ಥೆಯ ಪಾವಿತ್ರ್ಯವನ್ನೇ ಹಾಳು ಮಾಡುತ್ತಿದೆ ಎಂದು ರಾಜ್ಯಪಾಲ ಜಗದೀಪ್ ಧನಕರ್ ಆರೋಪಿಸಿದ್ದಾರೆ.
ವರ್ಷದಿಂದ ಹಲವು ವಿಷಯಗಳ ಬಗ್ಗೆ ಟಿಎಂಸಿ ಸರ್ಕಾರದೊಂದಿಗೆ ಹಲವು ಪ್ರಕರಣಗಳ ಕಾರಣಕ್ಕಾಗಿ ಸಂಘರ್ಷ ನಡೆಸುತ್ತಲೇ ಇರುವ ರಾಜ್ಯಪಾಲರು, ‘ಸರ್ಕಾರ ರಾಜಭವನವನ್ನು ಕಣ್ಗಾವಲಿನಲ್ಲಿಟ್ಟಿದ್ದು, ಇದರಿಂದ ರಾಜ್ಯದಲ್ಲಿ ಅರಾಜಕತೆ ಮುಂದುವರಿದಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
‘ರಾಜಭವನದ ಪಾವಿತ್ರ್ಯ ರಕ್ಷಣೆಗೆ ನಾನು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇನೆ’ ಎಂದು ತಿಳಿಸಿದ್ದಾರೆ.