ಭೋಪಾಲ್ ಕೆರೆಯ ದಡದಲ್ಲಿರುವ ವನ ವಿಹಾರ ಉದ್ಯಾನದಲ್ಲಿ ಹುಲಿಗಳಿರುವ ಬೋನಿಗೆ ಕೆಲ ಕಿಡಿಗೇಡಿಗಳು ಕಲ್ಲು ಹೊಡೆದಿದ್ದಾರೆ. ಕಲ್ಲು ಹೊಡೆಯಬೇಡಿ ಎಂದು ಬುದ್ಧಿ ಹೇಳಿದರೂ ಕೇಳದೆ, ಜೋರಾಗಿ ಗಹಗಹಿಸಿ ನಗುತ್ತಾ, ಕಿರುಚುತ್ತಾ ಚೇಷ್ಟೆ ಮುಂದುವರಿಸಿದ್ದಾರೆ. ಬೋನನ್ನು ಅಲ್ಲಾಡಿಸಿ ಉದ್ಧಟತನ ಮೆರೆದಿದ್ಧಾರೆ. ಹುಲಿಗಳಿಗೆ ಯಾವುದೇ ಭದ್ರತೆ ಇಲ್ಲ. ಇಲ್ಲಿ ಅವುಗಳ ಅಪಮಾನ ನಡೆಯುತ್ತಿದೆ ಎಂದು ರವೀನಾ ಸೋಮವಾರ ಟ್ವೀಟ್ ಮಾಡಿದ್ದರು.