<p><strong>ಕೋಯಿಕ್ಕೋಡ್ (ಕೇರಳ): </strong>ಚಾಲಪ್ಪುರಂ ಬಳಿ ಇರುವ ಕೇಸರಿ ಮಾಧ್ಯಮ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ಎಸ್ಎಸ್) ಮುಖ್ಯಸ್ಥರಾದ ಮೋಹನ್ ಭಾಗವತ್ ಮಂಗಳವಾರ ಉದ್ಘಾಟಿಸಿದರು.</p>.<p>‘ಸಂಘ ಪರಿವಾರದ ಅಂಗವಾದ ಕೇಸರಿ ವಾರಪತ್ರಿಕೆಯು 1951ರಲ್ಲಿ ಪ್ರಾರಂಭವಾಯಿತು. ಭಾರತದ ಉನ್ನತಿಯ ಆಲೋಚನೆಯ ಗುರಿಯನ್ನಿಟ್ಟುಕೊಂಡು ಕೇಸರಿ ನಡೆದಿದೆ. ಕಳೆದ 70 ವರ್ಷದಲ್ಲಿ ಕೇಸರಿಯ ಪಥ ಸುಲಭವಾಗಿರಲಿಲ್ಲ. ಇಂದಿನ ಪೀಳಿಗೆ ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಭಾಗವತ್ ಹೇಳಿದರು.</p>.<p>‘ಸತ್ಯವನ್ನು ಪ್ರಕಟಿಸುವುದಕ್ಕೂ ಒಪ್ಪಿಗೆ ಪಡೆಯಬೇಕಾದ ಕಾಲವಿತ್ತು. ಸತ್ಯದ ಮೇಲಿರುವ ನಂಬಿಕೆ ಹಾಗೂ ಕಠಿಣ ಶ್ರಮವು ಯಶಸ್ಸಿಗೆ ಕಾರಣವಾಗುತ್ತದೆ. ಇದನ್ನು ಕೇಸರಿ ಸಾಧಿಸಿದೆ’ ಎಂದರು.</p>.<p>ರಾಜ್ಯದಲ್ಲಿ ಹುತಾತ್ಮರಾದ ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಕುರಿತು ಇರುವ ಡಾ.ಎ.ಕೆ.ಎಂ.ದಾಸ್ ಅವರು ಬರೆದಿರುವ ‘ಆರ್ಎಸ್ಎಸ್ ಇನ್ ಕೇರಳ: ಸಾಗ ಆಫ್ ಎ ಸ್ಟ್ರಗಲ್’ ಸೇರಿದಂತೆ ಎಂಟು ಕೃತಿಗಳನ್ನು ಭಾಗವತ್ ಬಿಡಯಗಡೆಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಯಿಕ್ಕೋಡ್ (ಕೇರಳ): </strong>ಚಾಲಪ್ಪುರಂ ಬಳಿ ಇರುವ ಕೇಸರಿ ಮಾಧ್ಯಮ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ಎಸ್ಎಸ್) ಮುಖ್ಯಸ್ಥರಾದ ಮೋಹನ್ ಭಾಗವತ್ ಮಂಗಳವಾರ ಉದ್ಘಾಟಿಸಿದರು.</p>.<p>‘ಸಂಘ ಪರಿವಾರದ ಅಂಗವಾದ ಕೇಸರಿ ವಾರಪತ್ರಿಕೆಯು 1951ರಲ್ಲಿ ಪ್ರಾರಂಭವಾಯಿತು. ಭಾರತದ ಉನ್ನತಿಯ ಆಲೋಚನೆಯ ಗುರಿಯನ್ನಿಟ್ಟುಕೊಂಡು ಕೇಸರಿ ನಡೆದಿದೆ. ಕಳೆದ 70 ವರ್ಷದಲ್ಲಿ ಕೇಸರಿಯ ಪಥ ಸುಲಭವಾಗಿರಲಿಲ್ಲ. ಇಂದಿನ ಪೀಳಿಗೆ ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಭಾಗವತ್ ಹೇಳಿದರು.</p>.<p>‘ಸತ್ಯವನ್ನು ಪ್ರಕಟಿಸುವುದಕ್ಕೂ ಒಪ್ಪಿಗೆ ಪಡೆಯಬೇಕಾದ ಕಾಲವಿತ್ತು. ಸತ್ಯದ ಮೇಲಿರುವ ನಂಬಿಕೆ ಹಾಗೂ ಕಠಿಣ ಶ್ರಮವು ಯಶಸ್ಸಿಗೆ ಕಾರಣವಾಗುತ್ತದೆ. ಇದನ್ನು ಕೇಸರಿ ಸಾಧಿಸಿದೆ’ ಎಂದರು.</p>.<p>ರಾಜ್ಯದಲ್ಲಿ ಹುತಾತ್ಮರಾದ ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಕುರಿತು ಇರುವ ಡಾ.ಎ.ಕೆ.ಎಂ.ದಾಸ್ ಅವರು ಬರೆದಿರುವ ‘ಆರ್ಎಸ್ಎಸ್ ಇನ್ ಕೇರಳ: ಸಾಗ ಆಫ್ ಎ ಸ್ಟ್ರಗಲ್’ ಸೇರಿದಂತೆ ಎಂಟು ಕೃತಿಗಳನ್ನು ಭಾಗವತ್ ಬಿಡಯಗಡೆಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>