‘ಜೌಗು ಪ್ರದೇಶಗಳ ಸವಕಳಿ ಮತ್ತು ನಾಶವು ಬಹಳ ಗಂಭೀರ ಸಮಸ್ಯೆಯಾಗಿದೆ. ಒಳಚರಂಡಿ, ಕಸ ವಿಲೇವಾರಿ, ಮಾಲಿನ್ಯ(ಕೈಗಾರಿಕಾ ತ್ಯಾಜ್ಯಗಳ ವಿಸರ್ಜನೆ, ಘನ ತ್ಯಾಜ್ಯಗಳ ವಿಲೇವಾರಿ), ಜಲ ವಿಜ್ಞಾನದ ಬದಲಾವಣೆ, ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಶೋಷಣೆ ಮತ್ತು ಕಾನೂನುಬಾಹಿರ ನಿರ್ಮಾಣಗಳಿಂದ ಜೀವವೈವಿಧ್ಯತೆಗೆ ಧಕ್ಕೆ ಉಂಟಾಗುತ್ತಿದೆ’ ಎಂದು ಸಚಿವಾಲಯವು ಹೇಳಿದೆ.