ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠವು, ‘ಅವರು ಮೂಲತಃ ಹೇಳಿದ್ದೇನು? ಆ ಕುರಿತ ಪೂರ್ಣ ಮಾಹಿತಿಯನ್ನು ನೀವು ಇನ್ನೂ ಸಲ್ಲಿಸಲಿಲ್ಲ’ ಎಂದು ರಾಮದೇವ್ ಪರ ವಕೀಲ ಮುಕುಲ್ ರೋಹಟಗಿ ಅವರಿಗೆ ಹೇಳಿತು. ಹೇಳಿಕೆಯ ಮೂಲಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ರೋಹಟಗಿ ಅವರು ತಿಳಿಸಿದ ನಂತರ, ನ್ಯಾಯಾಲಯವು ವಿಚಾರಣೆಯನ್ನು ಜುಲೈ 5ಕ್ಕೆ ಮುಂದೂಡಿತು.