‘ಕೋವಿಡ್–19 ಚಿಕಿತ್ಸೆಗೆ ಅಭಿವೃದ್ಧಿಪಡಿಲಾಗಿದೆ ಎನ್ನಲಾದ ಆಯುರ್ವೇದ ಮೂಲದ ಔಷಧಿಯ ಪರಿಣಾಮಕಾರಿ ಗುಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ಹಕ್ಕನ್ನು ನಿರ್ಣಯಿಸುವ ಸ್ಥಾನದಲ್ಲಿ ನ್ಯಾಯಾಲಯವು ಇಲ್ಲ. ಹಾಗಾಗಿ, ನಾವು ಒಟ್ಟಾರೆ ಅರ್ಜಿಯನ್ನು ತಿರಸ್ಕರಿಸುತ್ತೇವೆ’ ಎಂದು ನ್ಯಾಯಮೂರ್ತಿಗಳಾದ ಆರ್.ಎಸ್. ರೆಡ್ಡಿ ಮತ್ತು ಎಸ್.ಆರ್. ಭಟ್ ಅವರನ್ನೊಳಗೊಂಡ ನ್ಯಾಯಪೀಠವು ಜೂನ್ 28ರಂದು ನೀಡಿದ ಆದೇಶದಲ್ಲಿ ತಿಳಿಸಿದೆ.