ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಹೇಮಂತ್ ಗುಪ್ತಾ ಅವರನ್ನೊಳಗೊಂಡ ನ್ಯಾಯಪೀಠವು, ‘ಈಗಾಗಲೇ ಚಾರ್ಜ್ಶೀಟ್ ದಾಖಲಾಗಿದೆ. ಕರ್ನಾಟಕ ಹೈಕೋರ್ಟ್ನ 2021ರ ಜ. 18ರ ಆದೇಶ ಪ್ರಕಾರ, ಆರೋಪಿಗೆ ಈಗಾಗಲೇ ₹ 75 ಕೋಟಿ ಮೊತ್ತದ ವಂಚನೆಗೆ ಸಂಬಂಧಿಸಿದಂತೆ ಜಾಮೀನು ನೀಡಲಾಗಿದೆ ಎಂಬುದನ್ನು ನ್ಯಾಯಾಲಯವು ಗಮನಿಸಿದೆ. ಹಾಗಾಗಿ, ಆರೋಪಿಯ ಜಾಮೀನನ್ನು ವಿಸ್ತರಿಸಬಹುದಾಗಿದೆ’ ಎಂದು ಅಭಿಪ್ರಾಯಪಟ್ಟಿತು.