ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಸಚಿವ ಏಕನಾಥ ಶಿಂಧೆ ನೇತೃತ್ವದಲ್ಲಿ ಬಂಡಾಯ ಎದ್ದಿರುವ 16 ಶಾಸಕರ ಅನರ್ಹತೆಯ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಅಮಾನತಿನಲ್ಲಿ ಇರಿಸಿದೆ. ಅನರ್ಹತೆಗೆ ಸಂಬಂಧಿಸಿ ಡೆಪ್ಯುಟಿ ಸ್ಪೀಕರ್ ನೀಡಿರುವ ನೋಟಿಸ್ಗೆ ಪ್ರತಿಕ್ರಿಯೆ ನೀಡಲು ಜುಲೈ 12ರವರೆಗೆ ಸಮಯಾವಕಾಶ ಕೊಟ್ಟಿದೆ. ನೋಟಿಸ್ಗೆ ಪ್ರತಿಕ್ರಿಯೆ ನೀಡಲು ಶಾಸಕರಿಗೆ ಉಪಸ್ಪೀಕರ್ ಸೋಮವಾರ ಸಂಜೆ 5.30ರವರೆಗೆ ಸಮಯ ಕೊಟ್ಟಿದ್ದರು.