‘ಮೆಹ್ತಾ, ನಿಮ್ಮ ಉತ್ತರವು ತೃಪ್ತಿದಾಯಕವಾಗಿಲ್ಲ. ಟಿ.ವಿ.ಯಲ್ಲಿ ಪ್ರಸಾರವಾಗುವ ಇಂತಹ ಸುದ್ದಿಗಳಿಗೆ (ಕೋಮು ದ್ವೇಷ ಹರಡುವ) ಕಡಿವಾಣ ಹಾಕಲು ಇರುವ ಮಾರ್ಗೋಪಾಯಗಳ ಕುರಿತ ಮಾಹಿತಿಯನ್ನು ನಿಮ್ಮಿಂದ ಬಯಸಿದ್ದೆವು. ಇಂತಹ ಸುದ್ದಿಗಳಿಗೆ ಕಡಿವಾಣ ಹಾಕಲು ಈಗ ಯಾವುದೇ ಕಾರ್ಯವಿಧಾನಗಳು ಇಲ್ಲದಿದ್ದ ಪಕ್ಷದಲ್ಲಿ ಹೊಸ ಕಾರ್ಯವಿಧಾನವೊಂದನ್ನು ಜಾರಿಗೆ ತನ್ನಿ’ ಎಂದು ಪೀಠವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಪ್ರಕರಣದ ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿತು.