ಸಿಐಡಿಯ ಐಜಿಪಿಯಾಗಿದ್ದ ನಿಂಬಾಳ್ಕರ್ ಅವರು ಇ.ಬಿ. ಶ್ರೀಧರ ಅವರು ಸಿದ್ಧಪಡಿಸಿದ್ದ ವರದಿಯನ್ನು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ 2019ರ ಜನವರಿ 18ರಂದು ಸಲ್ಲಿಸಿದ್ದರು. ಐಎಂಎ ಸಮೂಹವು ಯಾವುದೇ ತಪ್ಪು ಎಸಗಿರುವುದು ತನಿಖೆಯಲ್ಲಿ ಪತ್ತೆಯಾಗಿಲ್ಲ ಎಂದು ತಿಳಿಸಿದ್ದರು. ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಕಾಯ್ದೆ 2004ರ ಅನ್ವಯ ಐಎಂಎ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯ ಇಲ್ಲ ಎಂದಿದ್ದರು ಎಂದು ಹೇಳಲಾಗಿದೆ.