ನವದೆಹಲಿ(ಪಿಟಿಐ): 2010ರ ವಿದೇಶಿ ದೇಣಿಗೆ(ನಿಯಂತ್ರಣ) ಕಾಯ್ದೆಗೆ ಮಾಡಲಾದ ತಿದ್ದುಪಡಿಗಳ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಈ ಹಿಂದೆ ವಿದೇಶಿ ದೇಣಿಗೆಯ ದುರುಪಯೋಗ ಮತ್ತು ದುರ್ಬಳಕೆ ಆಗಿರುವುದನ್ನು ಗಮನಿಸಿ, ಕಠಿಣಕ್ರಮಕೈಗೊಳ್ಳಲು ಮುಂದಾಗಿರುವುದು ಸರಿಯಾಗಿದೆ ಎಂದು ತಿಳಿಸಿದೆ.