<p><strong>ಮುಂಬೈ (ಪಿಟಿಐ):</strong> ಬಾಲಿವುಡ್ ನಟ ಶಾರುಕ್ ಖಾನ್ ಅವರ ವ್ಯವಸ್ಥಾಪಕಿ ಪೂಜಾ ದದ್ಲಾನಿ, ಎನ್ಸಿಬಿ ಕಚೇರಿಗೆ ಶನಿವಾರ ಭೇಟಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.</p>.<p>ಪೂಜಾ ಅವರು ಲಕೋಟೆ ಹಿಡಿದು ಬೆಳಿಗ್ಗೆ ಸುಮಾರು 10 ಗಂಟೆಗೆ ಕಚೇರಿ ಒಳಗೆ ಹೋದರು. ಸುಮಾರು ಒಂದು ಗಂಟೆ ಬಳಿಕ ಕಚೇರಿಯಿಂದ ಹೊರಬಂದ ಅವರ ಪ್ರತಿಕ್ರಿಯೆ ಪಡೆಯಲು ಸುದ್ದಿಗಾರರು ಪ್ರಯತ್ನಿಸಿದರು. ಆದರೆ, ಅವರು ಏನನ್ನೂ ಮಾತನಾಡದೇ ಅಲ್ಲಿಂದ ಹೊರಟರು ಎನ್ನಲಾಗಿದೆ.</p>.<p>ಶುಕ್ರವಾರವಷ್ಟೇ ಶಾರುಕ್ ಖಾನ್ ಅಂಗರಕ್ಷಕ ಎನ್ಸಿಬಿ ಕಚೇರಿಗೆ ತೆರಳಿ ಕೆಲವು ದಾಖಲೆಗಳಿದ್ದ ಮೊಹರು ಮಾಡಿರುವ ಲಕೋಟೆಯನ್ನು ಹಸ್ತಾಂತರಿಸಿದ್ದರು.</p>.<p class="Subhead">ತಪ್ಪಾಗಿ ಅರ್ಥೈಸಲಾಗುತ್ತಿದೆ: ಹಡಗಿನಲ್ಲಿ ವಶಪಡಿಸಿಕೊಂಡ ಮಾದಕದ್ರವ್ಯದ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು, ನಾನು ಈ ಹಿಂದೆ ಮಾಡಿದ್ದ ವಾಟ್ಸ್ಆ್ಯಪ್ ಸಂದೇಶಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ’ ಎಂದು ಆರ್ಯನ್ ಖಾನ್ ಬಾಂಬೆ ಹೈಕೋರ್ಟ್ಗೆ ಸಲ್ಲಿಸಿರುವ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದಾರೆ. ತನಿಖಾ ಅಧಿಕಾರಿಗಳು ವಾಟ್ಸ್ಆ್ಯಪ್ ಸಂದೇಶಗಳನ್ನು ಅರ್ಥೈಸಿರುವ ರೀತಿ ಸರಿಯಲ್ಲ ಮತ್ತು ನ್ಯಾಯ<br />ಬದ್ಧವಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.</p>.<p class="Subhead"><strong>ಸಾಕ್ಷ್ಯ ಇಲ್ಲದಿದ್ದಲ್ಲಿ ಮಲಿಕ್ ಆರೋಪಿಸುತ್ತಿರಲಿಲ್ಲ (ಥಾಣೆ):</strong> ‘ಎನ್ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ನವಾಬ್ ಮಲಿಕ್ ಅವರಿಗೆ ಪ್ರಮುಖ ಸಾಕ್ಷ್ಯಗಳು ದೊರಕಿ<br />ರಬಹುದು. ಅದಿಲ್ಲದೇ ಅವರು ವಾಂಖೆಡೆ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರಲಿಲ್ಲ’ ಎಂದು ಮಹಾರಾಷ್ಟ್ರ ಎನ್ಸಿಪಿ ಘಟಕದ ಮುಖ್ಯಸ್ಥ ಮತ್ತು ರಾಜ್ಯ ಸಚಿವ ಜಯಂತ್ ಪಾಟೀಲ್ ಹೇಳಿದ್ದಾರೆ. ಸದ್ಯದಲ್ಲೇ ಈ ಕುರಿತು ಸ್ಪಷ್ಟ ಚಿತ್ರಣ ದೊರಕಲಿದೆ ಎಂದಿದ್ದಾರೆ.</p>.<p>ಎನ್ಸಿಬಿ ಅಧಿಕಾರಿಗಳು ನಡೆಸಿದ ದಾಳಿ ಬಗ್ಗೆ ಮೊದಲಿನಿಂದಲೂ ಮಲಿಕ್ ಟೀಕೆ ನಡೆಸುತ್ತಿದ್ದಾರೆ. ‘ವಾಂಖೆಡೆ ಒಬ್ಬ ನಕಲಿ ಅಧಿಕಾರಿ. ಅವರ ವಿರುದ್ಧದ ಸಾಕ್ಷ್ಯಗಳು ಬಹಿರಂಗವಾದರೆ ಅವರು ಸರ್ಕಾರಿ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ’ ಎಂದು ಇತ್ತೀಚೆಗೆ ಮಲಿಕ್ ಹೇಳಿಕೆ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ):</strong> ಬಾಲಿವುಡ್ ನಟ ಶಾರುಕ್ ಖಾನ್ ಅವರ ವ್ಯವಸ್ಥಾಪಕಿ ಪೂಜಾ ದದ್ಲಾನಿ, ಎನ್ಸಿಬಿ ಕಚೇರಿಗೆ ಶನಿವಾರ ಭೇಟಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.</p>.<p>ಪೂಜಾ ಅವರು ಲಕೋಟೆ ಹಿಡಿದು ಬೆಳಿಗ್ಗೆ ಸುಮಾರು 10 ಗಂಟೆಗೆ ಕಚೇರಿ ಒಳಗೆ ಹೋದರು. ಸುಮಾರು ಒಂದು ಗಂಟೆ ಬಳಿಕ ಕಚೇರಿಯಿಂದ ಹೊರಬಂದ ಅವರ ಪ್ರತಿಕ್ರಿಯೆ ಪಡೆಯಲು ಸುದ್ದಿಗಾರರು ಪ್ರಯತ್ನಿಸಿದರು. ಆದರೆ, ಅವರು ಏನನ್ನೂ ಮಾತನಾಡದೇ ಅಲ್ಲಿಂದ ಹೊರಟರು ಎನ್ನಲಾಗಿದೆ.</p>.<p>ಶುಕ್ರವಾರವಷ್ಟೇ ಶಾರುಕ್ ಖಾನ್ ಅಂಗರಕ್ಷಕ ಎನ್ಸಿಬಿ ಕಚೇರಿಗೆ ತೆರಳಿ ಕೆಲವು ದಾಖಲೆಗಳಿದ್ದ ಮೊಹರು ಮಾಡಿರುವ ಲಕೋಟೆಯನ್ನು ಹಸ್ತಾಂತರಿಸಿದ್ದರು.</p>.<p class="Subhead">ತಪ್ಪಾಗಿ ಅರ್ಥೈಸಲಾಗುತ್ತಿದೆ: ಹಡಗಿನಲ್ಲಿ ವಶಪಡಿಸಿಕೊಂಡ ಮಾದಕದ್ರವ್ಯದ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು, ನಾನು ಈ ಹಿಂದೆ ಮಾಡಿದ್ದ ವಾಟ್ಸ್ಆ್ಯಪ್ ಸಂದೇಶಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ’ ಎಂದು ಆರ್ಯನ್ ಖಾನ್ ಬಾಂಬೆ ಹೈಕೋರ್ಟ್ಗೆ ಸಲ್ಲಿಸಿರುವ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದಾರೆ. ತನಿಖಾ ಅಧಿಕಾರಿಗಳು ವಾಟ್ಸ್ಆ್ಯಪ್ ಸಂದೇಶಗಳನ್ನು ಅರ್ಥೈಸಿರುವ ರೀತಿ ಸರಿಯಲ್ಲ ಮತ್ತು ನ್ಯಾಯ<br />ಬದ್ಧವಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.</p>.<p class="Subhead"><strong>ಸಾಕ್ಷ್ಯ ಇಲ್ಲದಿದ್ದಲ್ಲಿ ಮಲಿಕ್ ಆರೋಪಿಸುತ್ತಿರಲಿಲ್ಲ (ಥಾಣೆ):</strong> ‘ಎನ್ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ನವಾಬ್ ಮಲಿಕ್ ಅವರಿಗೆ ಪ್ರಮುಖ ಸಾಕ್ಷ್ಯಗಳು ದೊರಕಿ<br />ರಬಹುದು. ಅದಿಲ್ಲದೇ ಅವರು ವಾಂಖೆಡೆ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರಲಿಲ್ಲ’ ಎಂದು ಮಹಾರಾಷ್ಟ್ರ ಎನ್ಸಿಪಿ ಘಟಕದ ಮುಖ್ಯಸ್ಥ ಮತ್ತು ರಾಜ್ಯ ಸಚಿವ ಜಯಂತ್ ಪಾಟೀಲ್ ಹೇಳಿದ್ದಾರೆ. ಸದ್ಯದಲ್ಲೇ ಈ ಕುರಿತು ಸ್ಪಷ್ಟ ಚಿತ್ರಣ ದೊರಕಲಿದೆ ಎಂದಿದ್ದಾರೆ.</p>.<p>ಎನ್ಸಿಬಿ ಅಧಿಕಾರಿಗಳು ನಡೆಸಿದ ದಾಳಿ ಬಗ್ಗೆ ಮೊದಲಿನಿಂದಲೂ ಮಲಿಕ್ ಟೀಕೆ ನಡೆಸುತ್ತಿದ್ದಾರೆ. ‘ವಾಂಖೆಡೆ ಒಬ್ಬ ನಕಲಿ ಅಧಿಕಾರಿ. ಅವರ ವಿರುದ್ಧದ ಸಾಕ್ಷ್ಯಗಳು ಬಹಿರಂಗವಾದರೆ ಅವರು ಸರ್ಕಾರಿ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ’ ಎಂದು ಇತ್ತೀಚೆಗೆ ಮಲಿಕ್ ಹೇಳಿಕೆ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>