ಬೆಂಗಳೂರು:ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ಚುನಾವಣೆ ಪ್ರಚಾರದ ಸಂದರ್ಭ ಹೇಳಿದ ಮಾತನ್ನು ಸ್ಮರಿಸಿರುವ ಸಂಸದ ಶಶಿ ತರೂರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಕಾರ್ಯವೈಖರಿಗೆ ಹೋಲಿಸಿ ಕಟುವಾಗಿ ಟೀಕಿಸಿದ್ದಾರೆ.
'ಭಾರತ ಬದಲಾಗಿದೆ. 70 ವರ್ಷಗಳ ನಂತರ 'ಕಾಂಗ್ರೆಸ್ ಮುಕ್ತ ಭಾರತ'ವನ್ನು ಬಯಸುತ್ತಿರುವ ಪ್ರಧಾನಿಯನ್ನು ನಾವು ನೋಡುತ್ತಿದ್ದೇವೆ. ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿ ತನ್ನ ಭಾವಚಿತ್ರವನ್ನು ಮುದ್ರಿಸಿಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ' ಎಂದು ಶಶಿ ತರೂರ್ ಟ್ವೀಟ್ ಮೂಲಕ ಕುಟುಕಿದ್ದಾರೆ.
1951/2ರ ಚುನಾವಣೆ ಪ್ರಚಾರದ ಸಂದರ್ಭ, 'ಒಬ್ಬ ವ್ಯಕ್ತಿಯ ಮಾತಿಗೆ ಲಕ್ಷಾಂತರ ಮಂದಿ ಸರಿ ಎನ್ನುವ ಭಾರತವನ್ನು ನಾನು ಬಯಸುವುದಿಲ್ಲ. ನನಗೆ ಪ್ರಬಲವಾದ ವಿರೋಧ ಪಕ್ಷ ಬೇಕು ಎಂದು ಜವಾಹರ ಲಾಲ್ ನೆಹರೂ ಹೇಳಿದ್ದರು' ಎಂದು ಶಶಿ ತರೂರ್ ತಮ್ಮ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
“I do not want India to be a country in which millions of people say yes to one man. I want a strong opposition.” ~Jawaharlal Nehru during the election campaign of 1951/2. How India has changed!70 years later we have a PM who wants “Congress-mukt Bharat”&has his pic on vax certs.