ಚೆನ್ನೈ: ಚಿನ್ನದಂಗಡಿಯ ದೋಚಿ ಸ್ಮಶಾನದಲ್ಲಿ ಹೂತಿಟ್ಟಿದ್ದ 16 ಕೆ.ಜಿಯಷ್ಟು ಬಂಗಾರವನ್ನು ತಮಿಳುನಾಡಿನ ವೆಲ್ಲೂರು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಡಿಸೆಂಬರ್ 15ರಂದು ವೆಲ್ಲೂರಿನ ಪ್ರತಿಷ್ಠಿತ ಚಿನ್ನದಂಗಡಿಗೆ ಪ್ರವೇಶಿಸಿದ್ದ ಮುಸುಕುಧಾರಿ ವ್ಯಕ್ತಿಯೊಬ್ಬ ಚಿನ್ನವನ್ನು ದೋಚಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಚೋರನ ಬೇಟೆಗೆ ವಿಶೇಷ ತನಿಖಾ ತಂಡ ರಚಿಸಿದ್ದ ಪೊಲೀಸರು, ಅನೈಕಟ್ನಲ್ಲಿ ಶಂಕಿತ ವ್ಯಕ್ತಿಯನ್ನು ಬಂಧಿಸಿದ್ದರು. ಬಳಿಕ, ಆತ ನೀಡಿದ ಸುಳಿವಿನ ಮೇಲೆ ಸ್ಮಶಾನದಲ್ಲಿ ಹೂತಿಟ್ಟಿದ್ದ ಚಿನ್ನವನ್ನು ಪತ್ತೆ ಮಾಡಿದ್ದಾರೆ. ಬಂಧಿತ ವ್ಯಕ್ತಿ ಕುರಿತಂತೆ ಪೊಲೀಸರು ಹೆಚ್ಚಿನ ಮಾಹಿತಿ ನೀಡಿಲ್ಲ.
ತನಿಖೆ ವೇಳೆ, ಜುವೆಲ್ಲರಿ ಶೋರೂಮ್ನಿಂದ ಕದ್ದ ಚಿನ್ನವನ್ನು ವೆಲ್ಲೂರಿನಿಂದ 40 ಕಿ.ಮೀ ದೂರದ ಒಡುಕತ್ತೂರಿನ ಸ್ಮಶಾನದಲ್ಲಿ ಹೂತಿಟ್ಟಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.