<p><strong>ನವದೆಹಲಿ:</strong> ದೊಡ್ಡ ಜನಸಂಖ್ಯೆಯನ್ನು ಇಟ್ಟುಕೊಂಡು ಭಾರತವು ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸಿದಂತೆ ಬೇರೆ ಯಾವ ರಾಷ್ಟ್ರಕ್ಕೂ ನಿಭಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.</p>.<p>ಭಾರತ ಸರ್ಕಾರ ಕೋವಿಡ್-19 ಸೋಂಕನ್ನು ಅತ್ಯುತ್ತಮವಾಗಿ ನಿರ್ವಹಿಸಿದೆ ಎಂದು ನ್ಯಾಯಮೂರ್ತಿ ಎಂ.ಆರ್. ಶಾ ಮತ್ತು ಎ.ಎಸ್.ಬೊಪಣ್ಣ ಪೀಠವು ಶ್ಲಾಘಿಸಿದ್ದು, ಕೋವಿಡ್-19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹50,000 ಸಹಾಯಧನ ನೀಡುವುದು ಸೇರಿದಂತೆ ಕೇಂದ್ರ ತಳೆದ ನಿರ್ಣಯಗಳನ್ನು ಮೆಚ್ಚಿಕೊಂಡಿದೆ.</p>.<p>ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೋವಿಡ್-19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹50,000 ಸಹಾಯಧನ ನೀಡಲು ಇರುವ ಮಾರ್ಗಸೂಚಿಗಳು, ಮರಣ ಪ್ರಮಾಣ ಪತ್ರ ಮತ್ತು ಸಂಕಷ್ಟ ಪರಿಹರಿಹಸಲು ಇರುವ ಕುಂದುಕೊರತೆಗಳ ಬಗ್ಗೆ ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದರು.</p>.<p><a href="https://www.prajavani.net/india-news/long-flight-means-papers-and-some-file-work-pm-narendra-modi-869215.html" itemprop="url" target="_blank">ದೀರ್ಘ ವಿಮಾನ ಪ್ರಯಾಣವೆಂದರೆ ಕಡತಗಳ ಕೆಲಸ:ನರೇಂದ್ರಮೋದಿ </a></p>.<p>'ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ, ಆದರೆ ನಾವು ಏನಾದರೂ ಮಾಡಬಹುದು. ಎಸ್ಡಿಆರ್ಎಫ್ನಿಂದ ₹50,000 ಸಹಾಯಧನ ನೀಡಲು ನಿರ್ಧರಿಸಿದ್ದೇವೆ. ಕೋವಿಡ್ ದೃಢ ಪಟ್ಟು, 30 ದಿನಗಳಲ್ಲಿ ಆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದರೂ, ಆತನ ಕುಟುಂಬವನ್ನು ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಹಣಕಾಸಿನ ನೆರವು ನೀಡಲಾಗುವುದು' ಎಂದು ತುಷಾರ್ ಮೆಹ್ತಾ ತಿಳಿಸಿದರು.</p>.<p>'ನಮಗೆ ಸಂತೋಷವಾಗಿದೆ. ಇದರಿಂದ ಸಾಕಷ್ಟು ಮಂದಿಗೆ ಸಾಂತ್ವನ ಸಿಕ್ಕಂತಾಗುತ್ತದೆ. ಹಲವರ ಕಣ್ಣೀರನ್ನು ಒರೆಸುತ್ತದೆ' ಎಂದು ಪೀಠವು ಪ್ರತಿಕ್ರಿಯಿಸಿದೆ.</p>.<p><a href="https://www.prajavani.net/india-news/lal-bahadur-shastri-reading-files-in-aero-plane-will-arrive-in-new-format-twitter-users-869210.html" itemprop="url" target="_blank">ಲಾಲ್ ಬಹದೂರ್ ಶಾಸ್ತ್ರಿ ಅವರ ಹೊಸ ರೂಪ ಬರುತ್ತದೆ: ನೆಟ್ಟಿಗರ ಪೂರ್ವ ಗ್ರಹಿಕೆ! </a></p>.<p>'ನೊಂದವರ ಕಣ್ಣೀರನ್ನು ಒರೆಸಲು ನಡೆಸುತ್ತಿರುವ ಪ್ರಯತ್ನದಿಂದ ಸಂತೋಷವಾಗಿದೆ. ಕೋವಿಡ್ ಸೋಂಕಿನ ಪರಿಸ್ಥಿತಿಯನ್ನು ಭಾರತ ನಿರ್ವಹಿಸಿದಂತೆ ಬೇರೆ ಯಾವ ರಾಷ್ಟ್ರವೂ ನಿರ್ವಹಿಸಲು ಸಾಧ್ಯವಿಲ್ಲ ಎಂಬುದು ಗಮನಾರ್ಹ ಎಂದು ಪೀಠ ಅಭಿಪ್ರಾಯ ಪಟ್ಟಿದೆ.</p>.<p>ಜನಸಂಖ್ಯೆಯ ಗಾತ್ರ, ಲಸಿಕೆಗಳ ಖರ್ಚು, ಆರ್ಥಿಕ ಪರಿಸ್ಥಿತಿ ಮತ್ತು ಪ್ರತಿಕೂಲ ಅಡೆತಡೆಗಳ ನಡುವೆ ಕೋವಿಡ್-19 ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಉತ್ತಮ ಹೆಜ್ಜೆಗಳನ್ನು ಇಟ್ಟಿದೆ ಎಂದು ಸುಪ್ರೀಂ ಪೀಠವು ಶ್ಲಾಘಿಸಿದೆ.</p>.<p><a href="https://www.prajavani.net/india-news/amarinder-singh-asks-is-there-space-for-insult-in-congress-869275.html" itemprop="url" target="_blank">ಕಾಂಗ್ರೆಸ್ನಲ್ಲಿ 'ಅಪಮಾನ'ಕ್ಕೆ ಜಾಗವಿದೆಯೇ?: ಅಮರಿಂದರ್ ಸಿಂಗ್ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೊಡ್ಡ ಜನಸಂಖ್ಯೆಯನ್ನು ಇಟ್ಟುಕೊಂಡು ಭಾರತವು ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸಿದಂತೆ ಬೇರೆ ಯಾವ ರಾಷ್ಟ್ರಕ್ಕೂ ನಿಭಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.</p>.<p>ಭಾರತ ಸರ್ಕಾರ ಕೋವಿಡ್-19 ಸೋಂಕನ್ನು ಅತ್ಯುತ್ತಮವಾಗಿ ನಿರ್ವಹಿಸಿದೆ ಎಂದು ನ್ಯಾಯಮೂರ್ತಿ ಎಂ.ಆರ್. ಶಾ ಮತ್ತು ಎ.ಎಸ್.ಬೊಪಣ್ಣ ಪೀಠವು ಶ್ಲಾಘಿಸಿದ್ದು, ಕೋವಿಡ್-19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹50,000 ಸಹಾಯಧನ ನೀಡುವುದು ಸೇರಿದಂತೆ ಕೇಂದ್ರ ತಳೆದ ನಿರ್ಣಯಗಳನ್ನು ಮೆಚ್ಚಿಕೊಂಡಿದೆ.</p>.<p>ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೋವಿಡ್-19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹50,000 ಸಹಾಯಧನ ನೀಡಲು ಇರುವ ಮಾರ್ಗಸೂಚಿಗಳು, ಮರಣ ಪ್ರಮಾಣ ಪತ್ರ ಮತ್ತು ಸಂಕಷ್ಟ ಪರಿಹರಿಹಸಲು ಇರುವ ಕುಂದುಕೊರತೆಗಳ ಬಗ್ಗೆ ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದರು.</p>.<p><a href="https://www.prajavani.net/india-news/long-flight-means-papers-and-some-file-work-pm-narendra-modi-869215.html" itemprop="url" target="_blank">ದೀರ್ಘ ವಿಮಾನ ಪ್ರಯಾಣವೆಂದರೆ ಕಡತಗಳ ಕೆಲಸ:ನರೇಂದ್ರಮೋದಿ </a></p>.<p>'ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ, ಆದರೆ ನಾವು ಏನಾದರೂ ಮಾಡಬಹುದು. ಎಸ್ಡಿಆರ್ಎಫ್ನಿಂದ ₹50,000 ಸಹಾಯಧನ ನೀಡಲು ನಿರ್ಧರಿಸಿದ್ದೇವೆ. ಕೋವಿಡ್ ದೃಢ ಪಟ್ಟು, 30 ದಿನಗಳಲ್ಲಿ ಆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದರೂ, ಆತನ ಕುಟುಂಬವನ್ನು ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಹಣಕಾಸಿನ ನೆರವು ನೀಡಲಾಗುವುದು' ಎಂದು ತುಷಾರ್ ಮೆಹ್ತಾ ತಿಳಿಸಿದರು.</p>.<p>'ನಮಗೆ ಸಂತೋಷವಾಗಿದೆ. ಇದರಿಂದ ಸಾಕಷ್ಟು ಮಂದಿಗೆ ಸಾಂತ್ವನ ಸಿಕ್ಕಂತಾಗುತ್ತದೆ. ಹಲವರ ಕಣ್ಣೀರನ್ನು ಒರೆಸುತ್ತದೆ' ಎಂದು ಪೀಠವು ಪ್ರತಿಕ್ರಿಯಿಸಿದೆ.</p>.<p><a href="https://www.prajavani.net/india-news/lal-bahadur-shastri-reading-files-in-aero-plane-will-arrive-in-new-format-twitter-users-869210.html" itemprop="url" target="_blank">ಲಾಲ್ ಬಹದೂರ್ ಶಾಸ್ತ್ರಿ ಅವರ ಹೊಸ ರೂಪ ಬರುತ್ತದೆ: ನೆಟ್ಟಿಗರ ಪೂರ್ವ ಗ್ರಹಿಕೆ! </a></p>.<p>'ನೊಂದವರ ಕಣ್ಣೀರನ್ನು ಒರೆಸಲು ನಡೆಸುತ್ತಿರುವ ಪ್ರಯತ್ನದಿಂದ ಸಂತೋಷವಾಗಿದೆ. ಕೋವಿಡ್ ಸೋಂಕಿನ ಪರಿಸ್ಥಿತಿಯನ್ನು ಭಾರತ ನಿರ್ವಹಿಸಿದಂತೆ ಬೇರೆ ಯಾವ ರಾಷ್ಟ್ರವೂ ನಿರ್ವಹಿಸಲು ಸಾಧ್ಯವಿಲ್ಲ ಎಂಬುದು ಗಮನಾರ್ಹ ಎಂದು ಪೀಠ ಅಭಿಪ್ರಾಯ ಪಟ್ಟಿದೆ.</p>.<p>ಜನಸಂಖ್ಯೆಯ ಗಾತ್ರ, ಲಸಿಕೆಗಳ ಖರ್ಚು, ಆರ್ಥಿಕ ಪರಿಸ್ಥಿತಿ ಮತ್ತು ಪ್ರತಿಕೂಲ ಅಡೆತಡೆಗಳ ನಡುವೆ ಕೋವಿಡ್-19 ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಉತ್ತಮ ಹೆಜ್ಜೆಗಳನ್ನು ಇಟ್ಟಿದೆ ಎಂದು ಸುಪ್ರೀಂ ಪೀಠವು ಶ್ಲಾಘಿಸಿದೆ.</p>.<p><a href="https://www.prajavani.net/india-news/amarinder-singh-asks-is-there-space-for-insult-in-congress-869275.html" itemprop="url" target="_blank">ಕಾಂಗ್ರೆಸ್ನಲ್ಲಿ 'ಅಪಮಾನ'ಕ್ಕೆ ಜಾಗವಿದೆಯೇ?: ಅಮರಿಂದರ್ ಸಿಂಗ್ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>