<p><strong>ತಿರುವನಂತಪುರಂ</strong>: ಕೇರಳದಲ್ಲಿ ಇತ್ತೀಚೆಗೆ ಮೂಢನಂಬಿಕೆಯಿಂದ ನಡೆದ ನರಬಲಿ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಇದೀಗ ಇಂತಹದೇ ಮತ್ತೊಂದು ಪ್ರಕರಣ ವರದಿಯಾಗಿದೆ.</p>.<p>ಸ್ನಾತಕೋತ್ತರ ಪದವಿ ಓದುತ್ತಿದ್ದ22 ವರ್ಷದ ವಿದ್ಯಾರ್ಥಿನಿಯೊಬ್ಬಳುಮೂಢನಂಬಿಕೆಯಿಂದ ತನ್ನ ಪ್ರಿಯಕರನಿಗೆ ವಿಷಪ್ರಾಶನ ಮಾಡಿಸಿ ಕೊಲೆಗೈದ ಘಟನೆ ತಿರುವನಂತಪುರಂ ಜಿಲ್ಲೆಯಲ್ಲಿ ನಡೆದಿದೆ.</p>.<p>ತಮಿಳುನಾಡು–ಕೇರಳ ಗಡಿಯಲ್ಲಿರುವ ರಾಮವರಂ ಚಿರಾ ಎಂಬ ಊರಿನ 22 ವರ್ಷದ ಶರೋನ್ ರಾಜ್ ಎಂಬ ಯುವಕ ಕೊಲೆಯಾದ ದುರ್ದೈವಿ.</p>.<p>ಶರೋನ್ ರಾಜ್ ಜೊತೆ ಪ್ರೇಮ ಸಂಬಂಧ ಹೊಂದಿದ್ದ ಗ್ರೀಷ್ಮಾ ಎಂಬ 22 ವರ್ಷದ ಯುವತಿ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಳು. ಆ ನಂತರ ಈ ಸಂಬಂಧ ಮುರಿದು ಬಿದ್ದು ಗ್ರೀಷ್ಮಾ ಮತ್ತೊಂದು ಹುಡುಗನ ಜೊತೆ ಮದುವೆಗೆ ಸಿದ್ಧತೆ ನಡೆಸಿದ್ದಳು. ಆದರೆ, ಜ್ಯೋತಿಷಿಯೊಬ್ಬ, ನಿನ್ನ ಮೊದಲನೇ ಸಬಂಧದ ವರ ಸತ್ತರೇ ಮಾತ್ರ ನೀನು ನಿನ್ನ ಮುಂದಿನ ಜೀವನದಲ್ಲಿ ಸಂತೋಷವಾಗಿರಬಹುದು ಎಂದು ಹೇಳಿದ್ದನಂತೆ.</p>.<p>ಇದನ್ನು ನಂಬಿದ ಗ್ರೀಷ್ಮಾ, ಶರೋನ್ ರಾಜ್ನನ್ನು ನಂಬಿಸಿ ಮನೆಗೆ ಕರೆಸಿಕೊಂಡು ಕಾಪರ್ ಸಲ್ಪೇಟ್ ಮಿಶ್ರಿತ ವಿಷವನ್ನು ಆಯರ್ವೇದ ಔಷಧಿ ಎಂದು ಕುಡಿಸಿದ್ದಳು. ಆದರೆ, ಶರೋನ್ ರಾಜ್ ಚಿಕಿತ್ಸೆ ಫಲಿಸದೇ ಕಳೆದ ಅಕ್ಟೋಬರ್ 25 ರಂದು ಮೃತರಾಗಿದ್ದಾರೆ.</p>.<p>ಪ್ರಕರಣದ ತನಿಖೆಯನ್ನು ವಿಶೇಷ ಅಪರಾಧ ದಳಕ್ಕೆ ವಹಿಸಲಾಗಿದ್ದು, ಗ್ರೀಷ್ಮಾ ವಿಷಪ್ರಾಶನ ಮಾಡಿಸಿದ ಸಂಗತಿ ಬೆಳಕಿಗೆ ಬಂದಿದೆ, ತನಿಖೆ ನಡೆಯುತ್ತಿದೆ ಎಂದು ತಿರುವನಂತಪುರ ಗ್ರಾಮೀಣ ಎಸ್ಪಿ ದಿವ್ಯಾ ಗೋಪಿನಾಥ್ ಅವರು ತಿಳಿಸಿದ್ದಾರೆ.</p>.<p>ಗ್ರೀಷ್ಮಾಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಶರೋನ್ ರಾಜ್ ತಂದೆ–ತಾಯಿ ಒತ್ತಾಯಿಸಿದ್ದಾರೆ. ಇತ್ತೀಚೆಗೆ ಕೇರಳದ ಪತ್ತನಂತಿಟ್ಟು ಬಳಿ ಮೂವರು ಸೇರಿಕೊಂಡು ಮೂಢನಂಬಿಕೆಯಿಂದ ಇಬ್ಬರು ಮಹಿಳೆಯರನ್ನು ನರಬಲಿ ಕೊಟ್ಟ ಪ್ರಕರಣ ವರದಿಯಾಗಿತ್ತು.</p>.<p><a href="https://www.prajavani.net/india-news/35-die-after-cable-bridge-collapses-in-gujarats-morbi-says-state-minister-brijesh-merja-984316.html" itemprop="url">ಮೊರ್ಬಿ ತೂಗು ಸೇತುವೆ ದುರಂತ: 35 ಮಂದಿ ಸಾವು, ಮೃತರ ಕುಟುಂಬಕ್ಕೆ ₹4 ಲಕ್ಷ ಪರಿಹಾರ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರಂ</strong>: ಕೇರಳದಲ್ಲಿ ಇತ್ತೀಚೆಗೆ ಮೂಢನಂಬಿಕೆಯಿಂದ ನಡೆದ ನರಬಲಿ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಇದೀಗ ಇಂತಹದೇ ಮತ್ತೊಂದು ಪ್ರಕರಣ ವರದಿಯಾಗಿದೆ.</p>.<p>ಸ್ನಾತಕೋತ್ತರ ಪದವಿ ಓದುತ್ತಿದ್ದ22 ವರ್ಷದ ವಿದ್ಯಾರ್ಥಿನಿಯೊಬ್ಬಳುಮೂಢನಂಬಿಕೆಯಿಂದ ತನ್ನ ಪ್ರಿಯಕರನಿಗೆ ವಿಷಪ್ರಾಶನ ಮಾಡಿಸಿ ಕೊಲೆಗೈದ ಘಟನೆ ತಿರುವನಂತಪುರಂ ಜಿಲ್ಲೆಯಲ್ಲಿ ನಡೆದಿದೆ.</p>.<p>ತಮಿಳುನಾಡು–ಕೇರಳ ಗಡಿಯಲ್ಲಿರುವ ರಾಮವರಂ ಚಿರಾ ಎಂಬ ಊರಿನ 22 ವರ್ಷದ ಶರೋನ್ ರಾಜ್ ಎಂಬ ಯುವಕ ಕೊಲೆಯಾದ ದುರ್ದೈವಿ.</p>.<p>ಶರೋನ್ ರಾಜ್ ಜೊತೆ ಪ್ರೇಮ ಸಂಬಂಧ ಹೊಂದಿದ್ದ ಗ್ರೀಷ್ಮಾ ಎಂಬ 22 ವರ್ಷದ ಯುವತಿ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಳು. ಆ ನಂತರ ಈ ಸಂಬಂಧ ಮುರಿದು ಬಿದ್ದು ಗ್ರೀಷ್ಮಾ ಮತ್ತೊಂದು ಹುಡುಗನ ಜೊತೆ ಮದುವೆಗೆ ಸಿದ್ಧತೆ ನಡೆಸಿದ್ದಳು. ಆದರೆ, ಜ್ಯೋತಿಷಿಯೊಬ್ಬ, ನಿನ್ನ ಮೊದಲನೇ ಸಬಂಧದ ವರ ಸತ್ತರೇ ಮಾತ್ರ ನೀನು ನಿನ್ನ ಮುಂದಿನ ಜೀವನದಲ್ಲಿ ಸಂತೋಷವಾಗಿರಬಹುದು ಎಂದು ಹೇಳಿದ್ದನಂತೆ.</p>.<p>ಇದನ್ನು ನಂಬಿದ ಗ್ರೀಷ್ಮಾ, ಶರೋನ್ ರಾಜ್ನನ್ನು ನಂಬಿಸಿ ಮನೆಗೆ ಕರೆಸಿಕೊಂಡು ಕಾಪರ್ ಸಲ್ಪೇಟ್ ಮಿಶ್ರಿತ ವಿಷವನ್ನು ಆಯರ್ವೇದ ಔಷಧಿ ಎಂದು ಕುಡಿಸಿದ್ದಳು. ಆದರೆ, ಶರೋನ್ ರಾಜ್ ಚಿಕಿತ್ಸೆ ಫಲಿಸದೇ ಕಳೆದ ಅಕ್ಟೋಬರ್ 25 ರಂದು ಮೃತರಾಗಿದ್ದಾರೆ.</p>.<p>ಪ್ರಕರಣದ ತನಿಖೆಯನ್ನು ವಿಶೇಷ ಅಪರಾಧ ದಳಕ್ಕೆ ವಹಿಸಲಾಗಿದ್ದು, ಗ್ರೀಷ್ಮಾ ವಿಷಪ್ರಾಶನ ಮಾಡಿಸಿದ ಸಂಗತಿ ಬೆಳಕಿಗೆ ಬಂದಿದೆ, ತನಿಖೆ ನಡೆಯುತ್ತಿದೆ ಎಂದು ತಿರುವನಂತಪುರ ಗ್ರಾಮೀಣ ಎಸ್ಪಿ ದಿವ್ಯಾ ಗೋಪಿನಾಥ್ ಅವರು ತಿಳಿಸಿದ್ದಾರೆ.</p>.<p>ಗ್ರೀಷ್ಮಾಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಶರೋನ್ ರಾಜ್ ತಂದೆ–ತಾಯಿ ಒತ್ತಾಯಿಸಿದ್ದಾರೆ. ಇತ್ತೀಚೆಗೆ ಕೇರಳದ ಪತ್ತನಂತಿಟ್ಟು ಬಳಿ ಮೂವರು ಸೇರಿಕೊಂಡು ಮೂಢನಂಬಿಕೆಯಿಂದ ಇಬ್ಬರು ಮಹಿಳೆಯರನ್ನು ನರಬಲಿ ಕೊಟ್ಟ ಪ್ರಕರಣ ವರದಿಯಾಗಿತ್ತು.</p>.<p><a href="https://www.prajavani.net/india-news/35-die-after-cable-bridge-collapses-in-gujarats-morbi-says-state-minister-brijesh-merja-984316.html" itemprop="url">ಮೊರ್ಬಿ ತೂಗು ಸೇತುವೆ ದುರಂತ: 35 ಮಂದಿ ಸಾವು, ಮೃತರ ಕುಟುಂಬಕ್ಕೆ ₹4 ಲಕ್ಷ ಪರಿಹಾರ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>