‘ಇಂದಿನ ಕಾಂಗ್ರೆಸ್ ಪಕ್ಷವು ಆಧುನಿಕ ಕಾಲದ ಮುಸ್ಲಿಂ ಲೀಗ್ ಆಗಿದೆ.ಮುಸ್ಲಿಂ ಲೀಗ್ ಹೇಗೆ ಹಿಂದೂಗಳ ಒಗ್ಗಟ್ಟನ್ನು ಒಡೆದು ದಬ್ಬಾಳಿಕೆ ಮಾಡಿತ್ತೋ, ಅದನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಅಶೋಕ್ ಗೆಹಲೋತ್ ಅವರು ಮುಂದುವರಿಸುತ್ತಿದ್ದಾರೆ. ರಾಜಸ್ಥಾನದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ರಾಜ್ಯದಲ್ಲಿ ಜಂಗಲ್ರಾಜ್ ನಿರ್ಮಾಣವಾಗಿದೆ’ ಎಂದು ಸೂರ್ಯ ಆರೋಪಿಸಿದರು.