ನವದೆಹಲಿ: ಕಾಶ್ಮೀರಿ ಪಂಡಿತ ಸಂಜಯ್ ಶರ್ಮಾ ಅವರನ್ನು ಹತ್ಯೆ ಮಾಡಿದ್ದ ಉಗ್ರರನ್ನು ಪ್ರಶಂಸಿಸಿ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್ಎಫ್) ಪೋಸ್ಟರ್ ಅಂಟಿಸಿದ್ದು, ಈ ಉಗ್ರ ಸಂಘಟನೆಯನ್ನು ಸದೆಬಡಿಯಲು ಭದ್ರತಾಪಡೆ ಪಣತೊಟ್ಟಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಜಮ್ಮು–ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಯ ಜಾಲವನ್ನು ಕಿತ್ತೊಗೆಯುವ ಉದ್ದೇಶದಿಂದ ಸಂಘಟನೆಗೆ ಹರಿದುಬರುತ್ತಿರುವ ದೇಣಿಗೆಗೆ ಕಡಿವಾಣ ಹಾಕಲು ಮತ್ತು ಅದರ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ತಿಳಿಸಿದ್ದಾರೆ.
ಶರ್ಮಾ ಹತ್ಯೆಯಲ್ಲಿ ಭಾಗಿಯಾಗಿದ್ದರು ಎನ್ನಲಾದ ಇಬ್ಬರು ಉಗ್ರರನ್ನು ಮಂಗಳವಾರ ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಗಿತ್ತು. ಈ ಮಧ್ಯೆ ಉಗ್ರರನ್ನು ಪ್ರಶಂಸಿಸಿ ಟಿಆರ್ಎಫ್ ಪೋಸ್ಟರ್ ಅಂಟಿಸಿದೆ ಎಂದು ತಿಳಿಸಿದ್ದಾರೆ.