ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಲ್ಲಿ ಶಶಿ ತರೂರ್‌‌ ‘ಅತಿಥಿ ಕಲಾವಿದ’: ಕೋಡಿಕ್ಕುನ್ನಿಲ್‌ ಸುರೇಶ್‌

Last Updated 28 ಆಗಸ್ಟ್ 2020, 16:26 IST
ಅಕ್ಷರ ಗಾತ್ರ

ತಿರುವನಂತಪುರ: ನಾಯಕತ್ವಕ್ಕೆ ಸಂಬಂಧಿಸಿದಂತೆ ಬದಲಾವಣೆಗೆ ಆಗ್ರಹಿಸಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ 23 ಮುಖಂಡರ ಗುಂಪಿನಲ್ಲಿ ಇದ್ದ ಸಂಸದ ಶಶಿ ತರೂರ್‌ ವಿರುದ್ಧ ಕೇರಳ ರಾಜ್ಯ ಕಾಂಗ್ರೆಸ್‌ ನಾಯಕರೇ ಕಿಡಿಕಾರಲಾರಂಭಿಸಿದ್ದಾರೆ.

‘ಪಕ್ಷದೊಳಗಿರುವ ಎಲ್ಲರೂ ಪಕ್ಷದ ನೀತಿ ನಿಯಮದಂತೆ ಕಾರ್ಯನಿರ್ವಹಿಸಬೇಕು. ಶಶಿ ತರೂರ್‌ ಖಂಡಿತವಾಗಿಯೂ ಒಬ್ಬ ರಾಜಕಾರಣಿ ಅಲ್ಲ. ಅವರು ಅತಿಥಿ ಕಲಾವಿದರಾಗಿ ಪಕ್ಷಕ್ಕೆ ಬಂದರು. ತರೂರ್‌ ಜಾಗತಿಕ ನಾಗರಿಕರಾಗಿರಬಹುದು. ಆದರೆ, ತನ್ನಿಚ್ಚೆಗೆ ತಕ್ಕಂತೆ ಏನೂ ಹೇಳಬಹುದು ಎಂದು ಯೋಚಿಸುವುದು ತಪ್ಪು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕ ಕೋಡಿಕ್ಕುನ್ನಿಲ್‌ ಸುರೇಶ್‌ ಶುಕ್ರವಾರ ಹೇಳಿದರು.

ಸುರೇಶ್‌ ಹೇಳಿಕೆಗೆ ಕೆಲ ಹಿರಿಯ ಕಾಂಗ್ರೆಸ್‌ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ತರೂರ್‌ ಅವರನ್ನು ತೆರೆಗೆ ಸರಿಸಲು ನಡೆಸಲಾಗುತ್ತಿರುವ ಪ್ರಯತ್ನ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT