ಕೇಜ್ರಿವಾಲ್ ಟೀಕೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಹಿಮಂತ ಶರ್ಮಾ, ‘ನೀವು(ಕೇಜ್ರಿವಾಲ್) ಆ ಚಿತ್ರವನ್ನು ತೆರಿಗೆ ಮುಕ್ತಗೊಳಿಸುತ್ತೀರೋ ಇಲ್ಲವೋ, ಆದರೆ, ನಮ್ಮನ್ನು ಅವಮಾನಿಸುವ ಹಕ್ಕು ನಿಮಗಿಲ್ಲ. ನೀವು ಏನು ಬೇಕಾದರೂ ಮಾಡಬಹುದು. ಆದರೆ, ಬಹಿರಂಗವಾಗಿ ಟೀಕಿಸುವ ಮೂಲಕ 'ಹಿಂದೂ ವಿರೋಧಿ' ಆಗಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಹಿಂದೂಗಳಲ್ಲಿಯೇ ಹಿಂದೂ ವಿರೋಧಿಗಳು ಇರುವುದಕ್ಕೆ ನಮ್ಮ ಸಮಾಜ ಈ ಸ್ಥಿತಿಯಲ್ಲಿದೆ. ಇಲ್ಲದಿದ್ದರೆ, ಹಿಂದೂ ನಾಗರಿಕತೆಯು ಜಗತ್ತಿಗೆ ದಾರಿ ತೋರಿಸುತ್ತಿತ್ತು’ ಎಂದು ಶರ್ಮಾ ಹೇಳಿದ್ದಾರೆ.