ನವದೆಹಲಿ: ‘ಲಸಿಕೆಯನ್ನು ಬಾಹುಗೆ(ತೋಳು) ನೀಡಲಾಗುತ್ತಿದೆ. ಹೀಗಾಗಿ, ಲಸಿಕೆ ಪಡೆದವರು ಬಾಹುಬಲಿಯಾಗುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಸಂಸತ್ ಅಧಿವೇಶನಕ್ಕೂ ಮುನ್ನ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲಸಿಕಾ ಅಭಿಯಾನವು ದೇಶದಲ್ಲಿ ತೀವ್ರಗೊಂಡಿದ್ದು, ಇದುವರೆಗೆ ಸುಮಾರು 40 ಕೋಟಿ ಮಂದಿ ಬಾಹುಬಲಿಗಳಾಗಿದ್ದಾರೆ’ ಎಂದು ಹೇಳಿದ್ದಾರೆ.
ಪ್ರಧಾನಿ ಅವರ ಹೇಳಿಕೆಗೆ ನೆಟ್ಟಿಗರು, ‘ಬಾಹುಬಲಿ’ ಸಿನಿಮಾ ಪ್ರಸ್ತಾಪಿಸಿ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
‘ಹೌದು. ಅರ್ಥಪೂರ್ಣವಾಗಿದೆ. ಬಾಹುಬಲಿಯ ಎರಡು ಭಾಗಗಳಿವೆ. ಡೋಸ್ 1 ಮತ್ತು ಡೋಸ್ 2’ ಎಂದು ಟ್ವಿಟರ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
‘ಕೊರೊನಾ ವೈರಸ್ ಕಟಪ್ಪಾ ರೀತಿಯದ್ದು. ಈ ವೈರಸ್ ಬೆನ್ನ ಹಿಂದೆಯೇ ಮತ್ತೆ ದಾಳಿ ಮಾಡುತ್ತದೆ. ಜೀವನದಲ್ಲಿ ನಾವು ನಿರ್ಲಕ್ಷ್ಯವಹಿಸಬಾರದು’ ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.