ಉದ್ದೇಶಿತ ಮೇಕೆದಾಟು ಯೋಜನೆಯು ಕೃಷ್ಣರಾಜಸಾಗರ, ಶಿಂಸಾ, ಅರ್ಕಾವತಿ, ಸುವರ್ಣಾವತಿ ನದಿಯ ಅಚ್ಚುಕಟ್ಟು ಭಾಗದಿಂದ ತಮಿಳುನಾಡುವಿಗೆ ಹರಿದುಬರುವ ನೀರಿಗೆ ತಡೆಯೊಡ್ಡಲಿದೆ. ಕಾವೇರಿ ನ್ಯಾಯಮಂಡಳಿ ತೀರ್ಪಿನ ಅನುಸಾರ ತಮಿಳುನಾಡಿಗೆ ಸಲ್ಲಬೇಕಾದ ನೀರೂ ಇದರಲ್ಲಿ ಸೇರಿದೆ. ಈ ಕಾರಣದಿಂದ ಯೋಜನೆ ಜಾರಿಯಿಂದ ತಮಿಳುನಾಡು ರೈತರ ಹಿತಕ್ಕೆ ಧಕ್ಕೆಯಾಗದು ಎಂಬ ವಾದವನ್ನು ಒಪ್ಪಲಾಗದು ಎಂದೂ ಹೇಳಿದ್ದಾರೆ.