ನವದೆಹಲಿ: ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆ (ಅಮೃತ ಮಹೋತ್ಸವ) ಸಂದರ್ಭದಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ, ದೇಶದಾದ್ಯಂತ ಇರುವ ತನ್ನ ಕಚೇರಿಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದಾಗಿ ತಿಳಿಸಿದೆ.
‘ಪ್ರವಾಸೋದ್ಯಮಿಗಳು ಮತ್ತು ಪ್ರವಾಸಿಗರಿಗೆ ಆತಿಥ್ಯ ನೀಡುವ ಸದಸ್ಯರು, ಟೂರ್ ಗೈಡ್ಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ‘ ಎಂದು ಪ್ರವಾಸೋದ್ಯಮ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಈ ಅಮೃತ ಮಹೋತ್ಸವ ಜನರ ಉತ್ಸವವಾಗಬೇಕು. ಜನರ ಸಹಭಾಗಿತ್ವದಲ್ಲೇ ಎಲ್ಲ ಕಾರ್ಯಕ್ರಮಗಳು ನಡೆಯಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಅಹಮದಾಬಾದ್ನ ಸಬರಮತಿ ಆಶ್ರಮದಲ್ಲಿ ‘ಪಾರಂಪರಿಕ ನಡಿಗೆ‘ಗೆ ಚಾಲನೆ ನೀಡಿದ್ದಾರೆ.
‘ಇದೇ ವೇಳೆ ಜೈಪುರ ಮತ್ತು ವಾರಾಣಸಿಯಲ್ಲಿನ ಪ್ರವಾಸೋದ್ಯಮ ಸಚಿವಾಲಯದ ಪ್ರಾದೇಶಿಕ ಕಚೇರಿ ಮತ್ತು ಕ್ಷೇತ್ರ ಕಚೇರಿಗಳಲ್ಲಿ ‘ಪಾರಂರಿಕ ನಡಿಗೆ‘ ಹಾಗೂ ಗಾಂಧಿ ತತ್ವ ಆಧಾರಿತ ಬೀದಿ ನಾಟಕ ಗಳನ್ನುಆಯೋಜಿಸಲಾಗಿತ್ತು‘ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.