‘ಉಮರ್ ಖಾಲಿದ್, ಫಹಾದ್ ಷಾ, ವಹೀದ್ ಪಾರಾ ಮತ್ತು ಸಿದ್ದಿಕ್ ಕಪನ್ ಅವರು ಸುಳ್ಳು ಆರೋಪದ ಮೇಲೆ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಆದರೆ, ಕೇಂದ್ರ ಸಚಿವರ ಮಗ ರೈತರನ್ನು ಕೊಂದ ಆರೋಪವನ್ನು ಹೊತ್ತಿದ್ದರೂ ಹೊರಗೆ ಬಂದಿದ್ದಾರೆ. ಗೋಡ್ಸೆಯ ಭಾರತದಲ್ಲಿ ಅಪರಾಧಿಗಳು ಮುಕ್ತವಾಗಿ ತಿರುಗುತ್ತಾರೆ. ಸತ್ಯವನ್ನು ಮಾತನಾಡುವವರು ಜೈಲು ಪಾಲಾಗಿದ್ದಾರೆ’ ಎಂದು ಮೆಹಬೂಬಾ ಟ್ವೀಟ್ ಮಾಡಿದ್ದಾರೆ.