ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್‌ಧಾಮ್‌ ಯಾತ್ರೆ: ಜುಲೈ 1ರಿಂದ ಭಾಗಶಃ ಆರಂಭಕ್ಕೆ ಅನುಮತಿ

Last Updated 20 ಜೂನ್ 2021, 16:15 IST
ಅಕ್ಷರ ಗಾತ್ರ

ನವದೆಹಲಿ: ಕೆಲವು ನಿರ್ಬಂಧಗಳೊಂದಿಗೆ ಜುಲೈ 1ರಿಂದ ಚಾರ್‌ಧಾಮ್‌ ಯಾತ್ರೆಗೆ ಅನುಮತಿ ನೀಡಿರುವುದಾಗಿ ಉತ್ತರಾಖಂಡ ರಾಜ್ಯ ಸರ್ಕಾರ ಭಾನುವಾರ ಹೇಳಿದೆ.

ದೇವಾಲಯಗಳು ಇರುವ ಜಿಲ್ಲೆಗಳ ಜನರು ಆಯಾ ದೇವಸ್ಥಾನಗಳಿಗೆ ಜುಲೈ 1ರಿಂದ ಯಾತ್ರೆ ಕೈಗೊಳ್ಳಲು ಅವಕಾಶ ನೀಡಲಾಗಿದೆ.ಜುಲೈ 11ರಿಂದ ಎಲ್ಲ ಜಿಲ್ಲೆಗಳ ಜನರು ಈ ಯಾತ್ರೆ ಕೈಗೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ.

ಪ್ರತಿ ವರ್ಷ ಮೇನಲ್ಲಿ ಚಾರ್‌ಧಾಮ್‌ ಯಾತ್ರೆ ಆರಂಭವಾಗುತ್ತದೆ. ಆದರೆ, ಕೋವಿಡ್‌–19 ಕಾರಣದಿಂದ ಈ ಬಾರಿ ಮೇನಲ್ಲಿ ಈ ಯಾತ್ರೆಯನ್ನು ರದ್ದುಮಾಡಲಾಗಿತ್ತು.

ಬದರಿನಾಥ ದೇಗುಲ ಚಮೋಲಿ ಜಿಲ್ಲೆಯಲ್ಲಿದೆ. ಕೇದಾರನಾಥ ದೇವಸ್ಥಾನ ರುದ್ರಪ್ರಯಾಗದಲ್ಲಿದ್ದರೆ ಗಂಗೋತ್ರಿ ಹಾಗೂ ಯಮುನೋತ್ರಿ ಉತ್ತರಕಾಶಿ ಜಿಲ್ಲೆಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT