ನವದೆಹಲಿ: ಕೆಲವು ನಿರ್ಬಂಧಗಳೊಂದಿಗೆ ಜುಲೈ 1ರಿಂದ ಚಾರ್ಧಾಮ್ ಯಾತ್ರೆಗೆ ಅನುಮತಿ ನೀಡಿರುವುದಾಗಿ ಉತ್ತರಾಖಂಡ ರಾಜ್ಯ ಸರ್ಕಾರ ಭಾನುವಾರ ಹೇಳಿದೆ.
ದೇವಾಲಯಗಳು ಇರುವ ಜಿಲ್ಲೆಗಳ ಜನರು ಆಯಾ ದೇವಸ್ಥಾನಗಳಿಗೆ ಜುಲೈ 1ರಿಂದ ಯಾತ್ರೆ ಕೈಗೊಳ್ಳಲು ಅವಕಾಶ ನೀಡಲಾಗಿದೆ.ಜುಲೈ 11ರಿಂದ ಎಲ್ಲ ಜಿಲ್ಲೆಗಳ ಜನರು ಈ ಯಾತ್ರೆ ಕೈಗೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ.
ಪ್ರತಿ ವರ್ಷ ಮೇನಲ್ಲಿ ಚಾರ್ಧಾಮ್ ಯಾತ್ರೆ ಆರಂಭವಾಗುತ್ತದೆ. ಆದರೆ, ಕೋವಿಡ್–19 ಕಾರಣದಿಂದ ಈ ಬಾರಿ ಮೇನಲ್ಲಿ ಈ ಯಾತ್ರೆಯನ್ನು ರದ್ದುಮಾಡಲಾಗಿತ್ತು.
ಬದರಿನಾಥ ದೇಗುಲ ಚಮೋಲಿ ಜಿಲ್ಲೆಯಲ್ಲಿದೆ. ಕೇದಾರನಾಥ ದೇವಸ್ಥಾನ ರುದ್ರಪ್ರಯಾಗದಲ್ಲಿದ್ದರೆ ಗಂಗೋತ್ರಿ ಹಾಗೂ ಯಮುನೋತ್ರಿ ಉತ್ತರಕಾಶಿ ಜಿಲ್ಲೆಯಲ್ಲಿವೆ.