‘ಎನ್ಟಿಪಿಸಿಯ ತಪೋವನ–ವಿಷ್ಣುಗಡ ಜಲ ವಿದ್ಯುತ್ ಯೋಜನೆಯಿಂದಾಗಿ ನಮಗೆ ಭೀತಿ ಎದುರಾಗಿದೆ. ಈ ಯೋಜನೆಯನ್ನು ಸಂಪರ್ಕಿಸುವ ಸುರಂಗ ಮಾರ್ಗವು ಗ್ರಾಮದ ಭೂ ಭಾಗದ ಕೆಳಗೆ ಹಾದು ಹೋಗಿದೆ. ಈ ಸುರಂಗದಿಂದಾಗಿ ರಾಷ್ಟ್ರೀಯ ಹೆದ್ದಾರಿ ಸಮೀಪ ಇದ್ದ ಹೋಟೆಲ್ವೊಂದು ಹೋದ ವರ್ಷದ ಜುಲೈನಲ್ಲಿ ಕುಸಿದಿತ್ತು. ಪೆಟ್ರೋಲ್ ಪಂಪ್ಗೆ ಭಾಗಶಃ ಹಾನಿಯಾಗಿತ್ತು’ ಎಂದು ಗ್ರಾಮದ ನಿವಾಸಿ ವಿಜೇಂದ್ರ ಲಾಲ್ ತಿಳಿಸಿದ್ದಾರೆ.