ಸೆಲಾಂಗ್, ಜೋಶಿಮಠ: ‘ನಮ್ಮ ಗ್ರಾಮಕ್ಕೂ ಜೋಶಿಮಠದ ಪರಿಸ್ಥಿತಿ ಎದುರಾಗುವ ಅಪಾಯವಿದೆ’ ಎಂದು ಜೋಶಿಮಠದಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಸೆಲಾಂಗ್ ಗ್ರಾಮದ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
‘ಹಿಂದಿನ ಕೆಲ ತಿಂಗಳುಗಳಿಂದ ಗ್ರಾಮದ ಹಲವು ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಭೂಮಿಯೂ ಬಿರುಕು ಬಿಟ್ಟಿದೆ. ಹೀಗಾಗಿ ಆತಂಕದಲ್ಲೇ ದಿನ ದೂಡುವಂತಾಗಿದೆ’ ಎಂದು ಅವರು ಹೇಳಿದ್ದಾರೆ.
‘ಎನ್ಟಿಪಿಸಿಯ ತಪೋವನ–ವಿಷ್ಣುಗಡ ಜಲ ವಿದ್ಯುತ್ ಯೋಜನೆಯಿಂದಾಗಿ ನಮಗೆ ಭೀತಿ ಎದುರಾಗಿದೆ. ಈ ಯೋಜನೆಯನ್ನು ಸಂಪರ್ಕಿಸುವ ಸುರಂಗ ಮಾರ್ಗವು ಗ್ರಾಮದ ಭೂ ಭಾಗದ ಕೆಳಗೆ ಹಾದು ಹೋಗಿದೆ. ಈ ಸುರಂಗದಿಂದಾಗಿ ರಾಷ್ಟ್ರೀಯ ಹೆದ್ದಾರಿ ಸಮೀಪ ಇದ್ದ ಹೋಟೆಲ್ವೊಂದು ಹೋದ ವರ್ಷದ ಜುಲೈನಲ್ಲಿ ಕುಸಿದಿತ್ತು. ಪೆಟ್ರೋಲ್ ಪಂಪ್ಗೆ ಭಾಗಶಃ ಹಾನಿಯಾಗಿತ್ತು’ ಎಂದು ಗ್ರಾಮದ ನಿವಾಸಿ ವಿಜೇಂದ್ರ ಲಾಲ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.