ಅಯೋಧ್ಯೆಯಲ್ಲಿ ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ವಿಎಚ್ಪಿ ರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್, ‘ನಮ್ಮ ಸಂಪೂರ್ಣ ಗಮನ ಈಗ ರಾಮ ಮಂದಿರ ನಿರ್ಮಾಣದ ಕಡೆ ಇದೆ. ರಾಮ ಮಂದಿರ ಮುಕ್ತಾಯ ಆಗುವವರೆಗೆ ಮಥುರಾದ ಶ್ರೀಕೃಷ್ಣ ಜನ್ಮಭೂಮಿ ವಿಷಯವನ್ನು ಕೈಗೆತ್ತಿಕೊಳ್ಳುವುದಿಲ್ಲ. 2023ರ ವೇಳೆಗೆ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಆಗಲಿದೆ. 2024ರಲ್ಲಿ ಮಥುರಾ ವಿವಾದವನ್ನು ಕೈಗೆತ್ತಿಕೊಳ್ಳುತ್ತೇವೆ’ ಎಂದು ಹೇಳಿದರು.