‘ಪ್ರಧಾನಿಯು ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥರು. ಅವರ ನೇತೃತ್ವದಲ್ಲಿ ಕಾಲೈಕುಂಡದಲ್ಲಿ ಆಯೋಜಿಸಲಾಗಿದ್ದ ಪರಿಶೀಲನಾ ಸಭೆಗೆ ನೀವು ಗೈರುಹಾಜರಾಗಿದ್ದೀರಿ. ಪ್ರಧಾನಿಯವರುನಿಮಗಾಗಿ 15 ನಿಮಿಷ ಕಾದಿದ್ದರು. ಆನಂತರ ಸಭೆಗೆ ಹಾಜರಾಗುತ್ತೀರೋ ಇಲ್ಲವೋ ಎಂದು ಕೇಳಿದಾಗ, ನಿಮ್ಮ ಮುಖ್ಯಮಂತ್ರಿಗಳ ಜತೆ ಬಂದು ಶೀಘ್ರವೇ ನಿರ್ಗಮಿಸಿದ್ದೀರಿ. ಇದು ಕೇಂದ್ರ ಸರ್ಕಾರವು ನೀಡಿರುವ ನಿರ್ದೇಶನದ ಉಲ್ಲಂಘನೆಯಾಗುತ್ತದೆ. ವಿಕೋಪ ನಿರ್ವಹಣಾ ಕಾಯ್ದೆಯ 51ನೇ ಬಿ ಸೆಕ್ಷನ್ನ ಉಲ್ಲಂಘನೆಯಾಗುತ್ತದೆ. ಈ ಕಾಯ್ದೆ ಅಡಿ ನಿಮ್ಮ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು’ ಎಂದು ನೋಟಿಸ್ನಲ್ಲಿ ಪ್ರಶ್ನಿಸಲಾಗಿದೆ.