‘ಮೊದಲು ಶಿವಸೇನಾ ಮೈತ್ರಿಕೂಟದಿಂದ ಹೊರ ಬಂದಿತ್ತು. ಮೈತ್ರಿಕೂಟದ ಕೊನೆಯ ಆಧಾರಸ್ತಂಭವಾಗಿದ್ದ ಶಿರೋಮಣಿ ಅಕಾಲಿದಳ ಎನ್ಡಿಎದಿಂದ ಹೊರ ನಡೆಯಿತು. ಆಗ, ಅವರನ್ನು ತಡೆಯುವುದಕ್ಕೆ ಯಾರೂ ಪ್ರಯತ್ನಿಸಲಿಲ್ಲ. ಪಂಜಾಬ್ ಮತ್ತು ಮಹಾರಾಷ್ಟ್ರ ರಾಜ್ಯಗಳ ‘ಬಲಿಷ್ಠ ಶಕ್ತಿ’ಯಾಗಿರುವ ಈ ಪಕ್ಷಗಳು ಎನ್ಡಿಎದಿಂದ ಹೊರಬಂದ ಮೇಲೆ, ಅಲ್ಲಿ ಇನ್ನೇನು ಉಳಿದಿದೆ‘ ಎಂದು ಶಿವಸೇನಾತನ್ನ ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಪ್ರಶ್ನಿಸಿದೆ. ‘ಈ ಮೈತ್ರಿಕೂಟ ಎರಡು ಸಿಂಹಗಳನ್ನು (ಅಕಾಲಿದಳ ಮತ್ತು ಸೇನಾ) ಕಳೆದುಕೊಂಡಿದೆ’ ಎಂದು ಉಲ್ಲೇಖಿಸಲಾಗಿದೆ.