ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಎರಡನೇ ಹಂತದ ಚುನಾವಣೆಗಾಗಿ ನಡೆದ 'ನಿಶ್ಚಯ್ ಸಂವಾದ್' ಎಂಬ ವರ್ಚುವಲ್ ರ್ಯಾಲಿ ಮೂಲಕ ಮಾತನಾಡಿದ ನಿತೀಶ್ ಕುಮಾರ್, ’ತಮ್ಮ ಸರ್ಕಾರವು ರಾಜ್ಯದ ಕೈಗಾರಿಕಾ ನೀತಿಯನ್ನು ಬದಲಾಯಿಸಿದ್ದು, ಇದರಿಂದ ಹಲವಾರು ಕೈಗಾರಿಕೆಗಳನ್ನು ಸ್ಥಾಪನೆಗೆ ಆಹ್ವಾನಿಸಲು ಸಾಧ್ಯವಾಗಿದೆ’ ಎಂದು ಹೇಳಿದರು.