ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚಿತ, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಆದ್ಯತೆ: ಪ್ರಧಾನಿ ಮೋದಿ

Last Updated 3 ಫೆಬ್ರುವರಿ 2023, 13:55 IST
ಅಕ್ಷರ ಗಾತ್ರ

ಗುವಾಹಟಿ: ವಂಚಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಕೇಂದ್ರ ಸರ್ಕಾರದ ಆದ್ಯತೆಯಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಅಸ್ಸಾಂ ಬರ್‌ಪೆಟಾ ಜಿಲ್ಲೆಯಲ್ಲಿ ಕೃಷ್ಣಗುರು ಏಕನಾಮ್ ಅಖಂಡ ಕೀರ್ತನದಲ್ಲಿ ವರ್ಚುವಲ್ ಭಾಷಣದಲ್ಲಿ ಮೋದಿ ಈ ಕುರಿತು ಪ್ರತಿಪಾದಿಸಿದರು.

2023-24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳೆಯರ ಉಳಿತಾಯದ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಲು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಅಸ್ಸಾಂನ ಸಂಸ್ಕೃತಿಯ ಪ್ರತೀಕ ಗಾಮೋಚಾ ಧರಿಸಿದ್ದ ಮೋದಿ, ಇದರ ಹಿಂದೆ ಅಸ್ಸಾಂ ಮಹಿಳೆಯರ ಕಠಿಣ ಪರಿಶ್ರಮವನ್ನು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT