ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ ಭಾರತ್ ಜೋಡೊ’ ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತಿದೆ: ಕನ್ಹಯ್ಯ ಕುಮಾರ್‌

Last Updated 13 ನವೆಂಬರ್ 2022, 14:00 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತ ಜೋಡೊ’ ಯಾತ್ರೆಯು ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಮೂಲಕ ತನ್ನ ಉದ್ದೇಶವನ್ನು ಯಶಸ್ವಿಯಾಗಿ ಈಡೇರಿಸುತ್ತಾ ಮುಂದೆ ಸಾಗುತ್ತಿದೆ ಕಾಂಗ್ರೆಸ್‌ ಭಾನುವಾರ ತಿಳಿಸಿದೆ.

ಎಐಸಿಸಿ ಮುಖ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್‌ ನಾಯಕ ಕನ್ಹಯ್ಯ ಕುಮಾರ್‌, ‘ಯಾತ್ರೆಯು ನಿರೀಕ್ಷೆಯನ್ನೂ ಮೀರಿ ಯಶಸ್ವಿಯಾಗುತ್ತಿದೆ. ಯಾತ್ರೆ ಆರಂಭವಾದಾಗ ಜನರು ಆಗಮಿಸುತ್ತಾರೋ ಇಲ್ಲವೋ, ದಿನಕ್ಕೆ 25 ಕಿ.ಮೀ ಸಾಗಲು ಸಾಧ್ಯವಾಗುತ್ತದೆಯೋ, ಇಲ್ಲವೋ ಎಂಬ ಹಲವು ಪ್ರಶ್ನೆಗಳಿದ್ದವು. ಆದರೆ ಈಗ 60 ದಿನಗಳು ಪೂರ್ಣಗೊಂಡಿವೆ’ ಎಂದು ಹೇಳಿದರು.

‘ಯಾತ್ರೆಯು ತಮ್ಮ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲಿದೆ ಎಂದು ಜನರಿಗೆ ಅರಿವಾಗಿದೆ. ಈ ಮೂಲಕ ಯಾತ್ರೆಯ ಮೊದಲ ಉದ್ದೇಶ ಈಡೇರಿದೆ. ಹಾಗೆಯೇ ದೇಶದ ಮತ್ತು ಜನರ ಸಮಸ್ಯೆಗಳಿಗೆ ಸರ್ಕಾರವನ್ನು ಹೊಣೆಯಾಗಿಸುವುದು ಯಾತ್ರೆಯ ಎರಡನೇ ಉದ್ದೇಶ. ಈ ನಿಟ್ಟಿನಲ್ಲಿ ಅದು ಸಾಗುತ್ತಿದೆ ’ ಎಂದು ಹೇಳಿದರು.

ಇದೇ ವೇಳೆ,ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ವ್ಯಕ್ತಿತ್ವಕ್ಕೆ ಚ್ಯುತಿ ತರಲು ಹರಡುತ್ತಿದ್ದಸುಳ್ಳುಗಳುಯಾತ್ರೆಯ ಮೂಲಕ ನಾಶವಾಗುತ್ತಿವೆ. ಅವರ ನೈಜ ವ್ಯಕ್ತಿತ್ವ ಇಡೀ ದೇಶದ ಮುಂದೆ ಅನಾವರಣಗೊಳ್ಳುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT