ಈ ಹಿಂದಿನ ವರ್ಗಾವಣೆ ನಿಯಮದಲ್ಲಿ ವಲಯ ವಿಂಗಡಣೆ ಅಸಮರ್ಪಕವಾಗಿತ್ತು. ಬಿಬಿಎಂಪಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮತ್ತು ಪಾಲಿಟೆಕ್ನಿಕ್ಗಳನ್ನು ಒಂದೇ ವಲಯದಲ್ಲಿ ಗುರುತಿಸಲಾಗಿತ್ತು. ಈ ಬಗ್ಗೆ ಸಿಬ್ಬಂದಿ ವರ್ಗದಿಂದ ದೂರುಗಳು ಬಂದಿದ್ದವು. ಅಲ್ಲದೆ, ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಪ್ರಾಂಶುಪಾಲರನ್ನು ಎಐಸಿಟಿಇ ಮಾರ್ಗಸೂಚಿ ಅನ್ವಯ ವರ್ಗಾಯಿಸಬೇಕಾಗಿತ್ತು. ಪತಿ–ಪತ್ನಿ, ಸರ್ಕಾರಿ, ಖಾಸಗಿ ಯೋಜನೆಗಳಲ್ಲಿ ಕರ್ತವ್ಯದಲ್ಲಿರುವವರು, ಎನ್ಸಿಸಿ ಅಧಿಕಾರಿ
ಗಳು, ಸಂಶೋಧನಾ ಗೈಡ್ಗಳು ಮತ್ತು 371(ಜೆ) ಪ್ರಕರಣಗಳಿಗೆ ವರ್ಗಾವಣೆಗೆ ಅವಕಾಶ ಇರಲಿಲ್ಲ.