ಮಹೇಶ ಕೊಳ್ಳಿ (14) ಕೊಲೆಯಾದ ಬಾಲಕ. 7ನೇ ತರಗತಿ ಓದಿದ್ದ ಈತ ಕೊರೊನಾ ಕಾರಣದಿಂದ ಶಾಲೆಗೆ ಹೋಗದೇ ಮನೆಯಲ್ಲಿ ಇರುತ್ತಿದ್ದ. ಸೋಮವಾರ ಸಂಜೆ ಮನೆಯಿಂದ ಹೊರ ಹೋಗಿದ್ದ. ಶುಕ್ರವಾರ ಶವ ಪತ್ತೆಯಾಗಿದೆ. ‘ಕೊಲೆ ಮಾಡುವ ಮುನ್ನ ಬಾಲಕನಿಗೆ ಮದ್ಯ ಕುಡಿಸಿದ್ದಾರೆ. ಮತ್ತು ಬರಿಸುವ ಔಷಧಿ ನೀಡಿ, ಆತನ ಮೂಗು ಹಾಗೂ ಮರ್ಮಾಂಗವನ್ನು ಕತ್ತರಿಸಿದ್ದಾರೆ. ಮುಖಕ್ಕೆ ಗುದ್ದಿ, ಹಲ್ಲುಗಳನ್ನು ಕಿತ್ತು ಚಿತ್ರಹಿಂಸೆ ನೀಡಿದ್ದಾರೆ. ಕೊಲೆ ಮಾಡಿದ ನಂತರ ಶವವನ್ನು ಗೋಣಿಚೀಲದಲ್ಲಿ ಕಟ್ಟಿ ಭೀಮಾ ನದಿಯಲ್ಲಿ ಎಸೆದಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.