ಬೆಂಗಳೂರು: ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಹೆಸರಿನಲ್ಲಿ 'ಫೇಸ್ಬುಕ್' ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿರುವ ಕಿಡಿಗೇಡಿಗಳು, ಹಣದ ಸಹಾಯ ಕೋರಿ ಸಚಿವರ ಸ್ನೇಹಿತರಿಗೆ ಸಂದೇಶ ಕಳುಹಿಸುತ್ತಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ನಿರಾಣಿ, ‘ನಕಲಿ ಖಾತೆ ಸೃಷ್ಟಿಸಿರುವ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಂ ಠಾಣೆಗೆ ದೂರು ನೀಡಲು ಚಿಂತನೆ ನಡೆಸಿದ್ದೇನೆ’ ಎಂದಿದ್ದಾರೆ.
It has come to my notice that some fraudsters have created a fake account using my name on social media and demanding money. This is totally false and intended to deceive people. Please don’t fall prey to such fraudsters. pic.twitter.com/rDTOQLq0TX
‘ನನ್ನ ಹೆಸರು ದುರ್ಬಳಕೆ ಮಾಡಿಕೊಂಡು ಕಿಡಿಗೇಡಿಗಳು ನಕಲಿ ಖಾತೆ ಸೃಷ್ಟಿಸಿದ್ದಾರೆ. ನನ್ನ ಹೆಸರಿನಲ್ಲೇ ಹಣ ಸಹಾಯ ಕೇಳಿದ ರೀತಿಯಲ್ಲಿ ಸಂದೇಶಗಳನ್ನು ಹರಿಬಿಡುತ್ತಿದ್ದಾರೆ. ಇಂಥ ಸಂದೇಶಗಳನ್ನು ಯಾರೂ ನಂಬಬಾರದು. ಕಿಡಿಗೇಡಿಗಳ ವಂಚನೆ ಜಾಲಕ್ಕೆ ಸಿಲುಕಬಾರದು’ ಎಂದೂ ಹೇಳಿದ್ದಾರೆ.