ಅರ್ಜಿಯಲ್ಲಿ ಏನಿದೆ?: ’ಅಂಬೇಡ್ಕರ್ ಅವರು ಸ್ವತಂತ್ರ ಭಾರತದ ಪಿತಾಮಹರಲ್ಲಿ ಒಬ್ಬರು.ಇಂತಹ ಮಹನೀಯರ ಭಾವಚಿತ್ರ ಯಾವುದೇ ಕೋರ್ಟ್ ಹಾಲ್ನಲ್ಲಿ ಕಾಣಸಿಗುವುದು ಅಪರೂಪ ಎಂಬಂತಾಗಿದೆ. ಈ ದಿಸೆಯಲ್ಲಿ ನಾನು ಅವರ ಭಾವಚಿತ್ರವನ್ನು ರಾಜ್ಯದ ಎಲ್ಲ ಕೋರ್ಟ್ ಹಾಲ್ಗಳಲ್ಲಿ ಹಾಕುವಂತೆ ರಿಜಿಸ್ಟ್ರಾರ್ ಜನರಲ್ ಅವರಿಗೆ 2019ರ ಡಿಸೆಂಬರ್ 27ರಂದೇ ಪತ್ರ ಬರೆದಿದ್ದೆ. ಆದರೆ, ಈ ಪತ್ರಕ್ಕೆ ನನಗೆ ಈತನಕ ಯಾವುದೇ ಉತ್ತರ ಬಂದಿರುವುದಿಲ್ಲ. ಆದ್ದರಿಂದ, ಈ ನಿಟ್ಟಿನಲ್ಲಿ ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.