<p>‘ಲೇ ತೆಪರ, ಐದು ವರ್ಷ ನಾನೇ ಸಿಎಂ ಅಂದ್ರೆ ಏನರ್ಥಲೆ?’ ಹರಟೆಕಟ್ಟೆಯಲ್ಲಿ ಗುಡ್ಡೆ ಕೇಳಿದ.</p><p>‘ನಿನ್ತೆಲಿ, ಅದ್ರಲ್ಲಿ ಬೇರೆ ಅರ್ಥ ಏನೈತಲೆ? ಅದೇ ಅರ್ಥ...’ ಎಂದ ತೆಪರೇಸಿ.</p><p>‘ನಂಗೇನೋ ಅನುಮಾನ, ಅದ್ರಲ್ಲಿ ಒಳಾರ್ಥ, ಗೂಢಾರ್ಥ ಏನರೆ ಇರಬೋದೇನೋ ಅಂತ...’</p><p>‘ಕರೆಕ್ಟ್, ನಮ್ ಸರ್ಕಾರ ಐದು ವರ್ಷ ಬಂಡೆ ತರ ಸುಭದ್ರ ಅಂದ್ರಲ್ಲ, ಈ ‘ಬಂಡೆ’ ಅಂತ ಅಂದಿದ್ರಲ್ಲಿ ಏನಾದ್ರು ಒಳಾರ್ಥ ಇರಬೋದಾ?’</p><p>‘ಏನೋಪ್ಪ, ಈ ರಾಜಕಾರಣಿಗಳ ಮಾತಿನ ಒಳಾರ್ಥ ಹುಡುಕೋದು ಬಾಳ ಕಷ್ಟ... ಏನೋ ಹೇಳಿರ್ತಾರೆ, ಆಮೇಲೆ ನಾನು ಆ ಅರ್ಥದಲ್ಲಿ ಹೇಳಿಲ್ಲ ಅಂದುಬಿಡ್ತಾರೆ...’ ದುಬ್ಬೀರ ತಲೆ ಕೊಡವಿದ.</p><p>‘ಗೂಗಲ್ನಲ್ಲಿ ಅವರ ಮಾತಿನ ಅರ್ಥ ಹುಡುಕಿದ್ರೆ ಹೆಂಗೆ?’</p><p>‘ಅದೂ ಎಷ್ಟೋ ಸಲ ದಾರಿ ತಪ್ಪಿದೆ ಬಿಡಲೆ...’</p><p>‘ನಮ್ ವಿಮಾನದ ಭವಿಷ್ಯ ಹೇಳಿದ್ರಲ್ಲ, ಆ ಸ್ವಾಮಿಗೋಳ್ನ ಕೇಳಿದ್ರೆ ಹೆಂಗೆ?’</p><p>‘ಅವ್ರು ಭವಿಷ್ಯ ಹೇಳೋರು, ಅರ್ಥ ಗಿರ್ಥ ಹೇಳೋರಲ್ಲ...’</p><p>‘ನಮ್ ಕಮಲ ಪಕ್ಷದೋರೂ ಭವಿಷ್ಯ ಹೇಳಾಕೆ ಶುರು ಮಾಡಿದಾರಂತೆ? ದಸರಾ ಒಳಗೆ ಸಿಎಂ ಚೇಂಜ್ ಆಗ್ತಾರಂತೆ?’ ಮಂಜಮ್ಮ ಕೇಳಿದಳು.</p><p>‘ಹೌದು, ಆದ್ರೆ ಯಾವ ದಸರಾ ಅಂತ ಹೇಳಿದಾರಾ? ಎರಡು ವರ್ಷ ಮುಂದಿನ ದಸರಾ ಇರಬೋದು...’ ಕೊಟ್ರೇಶಿ ಕೊಕ್ಕೆ.</p><p>‘ಕರೆಕ್ಟ್, ನಮ್ ಕೈ ಪಕ್ಷದ ರಾಜಣ್ಣ ಸೆಪ್ಟೆಂಬರ್<br>ಕ್ರಾಂತಿ ಅಂದ್ರು. ಆಮೇಲೆ ನಾನೇಳಿದ್ದು ಕುರ್ಚಿ ಕ್ರಾಂತಿ<br>ಅಲ್ಲ, ಕೃಷಿ ಕ್ರಾಂತಿ ಅಂದ್ರು...’ ಗುಡ್ಡೆ ನಕ್ಕ.</p><p>‘ಒಟ್ಟಾರೆ ಕುರ್ಚಿ ಅಲುಗಾಡ್ತಾ ಐತೆ...’ ತೆಪರೇಸಿ ತಲೆದೂಗುತ್ತ ಹೇಳಿದ. </p><p>‘ನಾನು ಹಂಗೇಳಿದ್ನಾ? ಈ ಮಂಜಮ್ಮನ ಹೋಟ್ಲು ಕುರ್ಚಿ ಅಲ್ಲಾಡ್ತಾ ಐತೆ ಅಂದೆ...’</p><p>ತೆಪರೇಸಿ ಮಾತಿಗೆ ಎಲ್ಲರೂ ಗೊಳ್ಳಂತ<br>ನಕ್ಕರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಲೇ ತೆಪರ, ಐದು ವರ್ಷ ನಾನೇ ಸಿಎಂ ಅಂದ್ರೆ ಏನರ್ಥಲೆ?’ ಹರಟೆಕಟ್ಟೆಯಲ್ಲಿ ಗುಡ್ಡೆ ಕೇಳಿದ.</p><p>‘ನಿನ್ತೆಲಿ, ಅದ್ರಲ್ಲಿ ಬೇರೆ ಅರ್ಥ ಏನೈತಲೆ? ಅದೇ ಅರ್ಥ...’ ಎಂದ ತೆಪರೇಸಿ.</p><p>‘ನಂಗೇನೋ ಅನುಮಾನ, ಅದ್ರಲ್ಲಿ ಒಳಾರ್ಥ, ಗೂಢಾರ್ಥ ಏನರೆ ಇರಬೋದೇನೋ ಅಂತ...’</p><p>‘ಕರೆಕ್ಟ್, ನಮ್ ಸರ್ಕಾರ ಐದು ವರ್ಷ ಬಂಡೆ ತರ ಸುಭದ್ರ ಅಂದ್ರಲ್ಲ, ಈ ‘ಬಂಡೆ’ ಅಂತ ಅಂದಿದ್ರಲ್ಲಿ ಏನಾದ್ರು ಒಳಾರ್ಥ ಇರಬೋದಾ?’</p><p>‘ಏನೋಪ್ಪ, ಈ ರಾಜಕಾರಣಿಗಳ ಮಾತಿನ ಒಳಾರ್ಥ ಹುಡುಕೋದು ಬಾಳ ಕಷ್ಟ... ಏನೋ ಹೇಳಿರ್ತಾರೆ, ಆಮೇಲೆ ನಾನು ಆ ಅರ್ಥದಲ್ಲಿ ಹೇಳಿಲ್ಲ ಅಂದುಬಿಡ್ತಾರೆ...’ ದುಬ್ಬೀರ ತಲೆ ಕೊಡವಿದ.</p><p>‘ಗೂಗಲ್ನಲ್ಲಿ ಅವರ ಮಾತಿನ ಅರ್ಥ ಹುಡುಕಿದ್ರೆ ಹೆಂಗೆ?’</p><p>‘ಅದೂ ಎಷ್ಟೋ ಸಲ ದಾರಿ ತಪ್ಪಿದೆ ಬಿಡಲೆ...’</p><p>‘ನಮ್ ವಿಮಾನದ ಭವಿಷ್ಯ ಹೇಳಿದ್ರಲ್ಲ, ಆ ಸ್ವಾಮಿಗೋಳ್ನ ಕೇಳಿದ್ರೆ ಹೆಂಗೆ?’</p><p>‘ಅವ್ರು ಭವಿಷ್ಯ ಹೇಳೋರು, ಅರ್ಥ ಗಿರ್ಥ ಹೇಳೋರಲ್ಲ...’</p><p>‘ನಮ್ ಕಮಲ ಪಕ್ಷದೋರೂ ಭವಿಷ್ಯ ಹೇಳಾಕೆ ಶುರು ಮಾಡಿದಾರಂತೆ? ದಸರಾ ಒಳಗೆ ಸಿಎಂ ಚೇಂಜ್ ಆಗ್ತಾರಂತೆ?’ ಮಂಜಮ್ಮ ಕೇಳಿದಳು.</p><p>‘ಹೌದು, ಆದ್ರೆ ಯಾವ ದಸರಾ ಅಂತ ಹೇಳಿದಾರಾ? ಎರಡು ವರ್ಷ ಮುಂದಿನ ದಸರಾ ಇರಬೋದು...’ ಕೊಟ್ರೇಶಿ ಕೊಕ್ಕೆ.</p><p>‘ಕರೆಕ್ಟ್, ನಮ್ ಕೈ ಪಕ್ಷದ ರಾಜಣ್ಣ ಸೆಪ್ಟೆಂಬರ್<br>ಕ್ರಾಂತಿ ಅಂದ್ರು. ಆಮೇಲೆ ನಾನೇಳಿದ್ದು ಕುರ್ಚಿ ಕ್ರಾಂತಿ<br>ಅಲ್ಲ, ಕೃಷಿ ಕ್ರಾಂತಿ ಅಂದ್ರು...’ ಗುಡ್ಡೆ ನಕ್ಕ.</p><p>‘ಒಟ್ಟಾರೆ ಕುರ್ಚಿ ಅಲುಗಾಡ್ತಾ ಐತೆ...’ ತೆಪರೇಸಿ ತಲೆದೂಗುತ್ತ ಹೇಳಿದ. </p><p>‘ನಾನು ಹಂಗೇಳಿದ್ನಾ? ಈ ಮಂಜಮ್ಮನ ಹೋಟ್ಲು ಕುರ್ಚಿ ಅಲ್ಲಾಡ್ತಾ ಐತೆ ಅಂದೆ...’</p><p>ತೆಪರೇಸಿ ಮಾತಿಗೆ ಎಲ್ಲರೂ ಗೊಳ್ಳಂತ<br>ನಕ್ಕರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>