ಕಡೂರು: ಅಡಿಕೆಗೆ ತಗುಲಿರುವ ಎಲೆಚುಕ್ಕಿ ರೋಗ ಹತೋಟಿ ನಿಟ್ಟಿನಲ್ಲಿ ಸಿಂಪಡಿಸಲು ಔಷಧ ವಿತರಿಸಲಾಗುತ್ತಿದೆ. ರೋಗದ ಮೂಲ ಪತ್ತೆ ಹಚ್ಚಿ, ನಿವಾರಣೆಗೆ ಔಷಧ ಶೋಧನೆಗೆ ವಿಜ್ಞಾನಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.
ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಎಲೆಚುಕ್ಕಿ ರೋಗವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಪರಿಹಾರಕ್ಕೆ ಕ್ರಮ ವಹಿಸುತ್ತೇವೆ ಎಂದು ಉತ್ತರಿಸಿದರು.
2013ರಲ್ಲಿ ಜನರು ಸಿದ್ದರಾಮಯ್ಯ ಅವರನ್ನು ನಂಬಿ ಮತ ಹಾಕಿದ್ದರು. ಅವರು ಮುಖ್ಯಮಂತ್ರಿಯಾಗಿದ್ದರು. ಅವರು ಜನರ ನಂಬಿಕೆ ಉಳಿಸಿಕೊಂಡಿಲ್ಲ. ಮತ್ತೆ ಜನರು ಅವರನ್ನು ನಂಬುವ ಪ್ರಶ್ನೆ ಇಲ್ಲ' ಎಂದರು.